ತಬ್ಲಿಘಿ ಜಮಾತ್‌ ಸದಸ್ಯರು ಭಯೋತ್ಪಾದಕರು: ಪ್ರಾಂಶುಪಾಲೆ

ಉತ್ತರ ಪ್ರದೇಶ: ಕಾನ್ಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆಯೊಬ್ಬರು ಮಾತನಾಡಿರುವ ವಿಡಿಯೋ ಒಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ತಬ್ಲಿಘಿ ಜಮಾತ್‌ ಸದಸ್ಯರನ್ನು ಅವರು ಭಯೋತ್ಪಾದಕರು ಎಂದು ಕರೆದಿದ್ದಾರೆ. ತಮ್ಮ ಕಚೇರಿಯಲ್ಲಿ ಹಲವು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಾಂಶುಪಾಲೆ. ಕೊರೊನಾ ಸೋಂಕು ಅಂಟಿಸಿಕೊಂಡ ತಬ್ಲಿಘಿ ಜಮಾತ್‌ ಸಂಘಟನೆ ಸದಸ್ಯರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ ಎಂದಿದ್ದಾರೆ. ತಬ್ಲಿಘಿ ಜಮಾತ್ ಸದಸ್ಯರಿಗೆ ಚಿಕಿತ್ಸೆ ನೀಡಲು ಐಸೋಲೇಷನ್ ವಾರ್ಡ್‌ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ತೆರಿಗೆದಾರರ ಕೋಟ್ಯಂತರ ರೂ ಹಣ ವ್ಯಯವಾಗುತ್ತಿದೆ ಎಂದು ಹೇಳಿದ್ದಾರೆ. ಇವರಿಗೆ ಈ ರೀತಿ ಚಿಕಿತ್ಸೆ ಕೊಡುವ ಬದಲು ಕಾಡುಗಳಲ್ಲಿ ಬಿಡಬೇಕು ಅಥವಾ ಜೈಲುಗಳಲ್ಲಿ ಕೂಡಿ ಹಾಕಬೇಕು ಎಂದು ಗುಡುಗಿದ್ದಾರೆ. ಈ ವಿಡಿಯೋ ಎಂದು ಚಿತ್ರೀಕರಣ ಮಾಡಲಾಗಿತ್ತು ಅನ್ನೋದು ತಿಳಿದುಬಂದಿಲ್ಲ. ಆದ್ರೆ, ಪ್ರಾಂಶುಪಾಲೆ ಆರತಿ ಲಾಲ್‌ಚಂದಾನಿ ಮಾತನಾಡುತ್ತಿರುವುದು  ಈ ವಿಡಿಯೋದಲ್ಲಿ ಆಡಿಯೋ ಸಮೇತ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಅಮರ್ ಆಳ್ವಾ ಪಾತ್ರದಲ್ಲಿ ರಿಷಬ್ ಶೆಟ್ಟಿ

Mon Jun 1 , 2020
ಕಿರಿಕ್ ಪರ‍್ಟಿ’, ‘ರಿಕ್ಕಿ’, ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾಗಳಿಗೆ ನರ‍್ದೇಶನ ಮಾಡಿ ಗುರುತಿಸಿಕೊಂಡ ರಿಷಬ್ ಶೆಟ್ಟಿ, ‘ಬೆಲ್ ಬಾಟಂ’ ಸಿನಿಮಾ ಮೂಲಕ ಹೀರೋ ಆಗಿಯೂ ಬಡ್ತಿ ಪಡೆದರು. ಆ ಬಳಿಕ ಅವರಿಗೆ ನಟನೆಯ ಅವಕಾಶ ಹೇರಳವಾಗಿ ಸಿಗುತ್ತಿದ್ದು, ಈಗ ಹೊಸ ಪ್ರಾಜೆಕ್ಟ್ವೊಂದಕ್ಕೆ ಕೈ ಹಾಕಿದ್ದಾರೆ.  ಡಾನ್ ಅಮರ್ ಆಳ್ವಾ ಪಾತ್ರಕ್ಕೆ ರಿಷಬ್ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ. ರಿಷಬ್ ಜೊತೆ ಸಹ-ನರ‍್ದೆಶಕನಾಗಿ ಕೆಲಸ ಮಾಡಿರುವ […]

Advertisement

Wordpress Social Share Plugin powered by Ultimatelysocial