ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ

ಚಾಮರಾಜನಗರ: ಮೂವರು ವಿದೇಶಿಯರು ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅರಣ್ಯದ ರಸ್ತೆಗಳಲ್ಲಿ ಸುತ್ತಾಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಬಾಡಿಗೆ ಬೈಕ್​ಗಳಲ್ಲಿ ಬಂದಿದ್ದ ಅವರು ಅನುಮತಿಯಿಲ್ಲದೆ ಬಂಡೀಪುರ ಅರಣ್ಯ ಪ್ರವೇಶಿಸಿ ಸುತ್ತಾಡಿದ್ದಾರೆ. ಇವರನ್ನು ಅರಣ್ಯ ಸಿಬ್ಬಂದಿ ತಡೆದು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ ಒರಟಾಗಿ ವರ್ತಿಸಿ ರೇಗಾಡಿದ್ದಾರೆ. ಹೀಗಾಗಿ ಈ ಮೂವರನ್ನು ಅತಿಕ್ರಮಪ್ರವೇಶದ ಆರೋಪದ ಮೇರೆಗೆ ಗುಂಡ್ಲುಪೇಟೆ ಪೊಲೀಸರ ವಶಕ್ಕೆ ನೀಡಲಾಗಿದೆ. ಡಿ.ಆರ್.ಡಿ.ಓದಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಲು ಪೋರ್ಚುಗೀಸ್ ದೇಶದ ನೂನೋ ರಿಕಾರ್ಡೋ ಬೆರ್ನಾಡೆಸ್ ಮಿರಾಂಡಾ, ಏಂಜೆಲೋ ಮೈಗ್ವೆಲ್ ಗ್ಯಾರಿಡೋ ಮತ್ತು ಥಾಮಸ್ ಪಿನ್ಹೋ ಮಾರ್ಕಿಜ್ ಎಂಬುವರು ಬೆಂಗಳೂರಿಗೆ ಬಂದಿದ್ದು ಅಲ್ಲಿಂದ ಅನುಮತಿ ಇಲ್ಲದೆ ಬಂಡೀಪುರಕ್ಕೆ ಬಂದಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ತರಬೇತಿ ವಿಮಾನ ಪತನ

Mon Jun 8 , 2020
ಭುವನೇಶ್ವರ: ಒಡಿಶಾ ರಾಜ್ಯದ ಧೆಂಕನಾಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಎರಡು ಸೀಟ್​ಗಳ ವಿಮಾನವೊಂದು ನೆಲಕ್ಕುರುಳಿದೆ. ಈ ಘಟನೆಯಲ್ಲಿ ವಿಮಾನದೊಳಗಿದ್ದ ಮಹಿಳಾ ಪೈಲಟ್ ಹಾಗೂ ಆಕೆಯ ಟ್ರೈನರ್ ಸಾವನ್ನಪ್ಪಿದ್ದಾರೆ. ಪೈಲಟ್ ಆಗಿ ಆಯ್ಕೆಯಾಗಿದ್ದ ಮಹಿಳೆಗೆ ಧೆಂಕನಾಲ್​ನಲ್ಲಿ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ವಿಮಾನ ಪತನಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಗೆ ಸೇರಿಸಿದ ಕೆಲವೇ ಹೊತ್ತಿನಲ್ಲಿ ಅವರಿಬ್ಬರೂ ಕೊನೆಯುಸಿರೆಳೆದಿದ್ದಾರೆ. ಟ್ರೈನಿ ಪೈಲಟ್ ಆಗಿದ್ದ ಅನೀಸ್ ಫಾತಿಮಾಗೆ ಕ್ಯಾಪ್ಟನ್ ಸಂಜೀವ್ ಕುಮಾರ್ ತರಬೇತಿ ನೀಡುತ್ತಿದ್ದರು. […]

Advertisement

Wordpress Social Share Plugin powered by Ultimatelysocial