ಬಿಹಾರಿ ಕೂಲಿ ಕಾರ್ಮಿಕರಿಂದ ಆಂತಕ

ಬೆಂಗಳೂರು:  ಇಡೀ ಬೆಂಗಳೂರನ್ನೇ ಬಿಹಾರಿ ಪ್ರಕರಣ ಬೆಚ್ಚಿ ಬೀಳಿಸುತ್ತಿದೆ. ಈ ನಡುವೆ ಬಿಹಾರಿ ಕಾರ್ಮಿಕರು ಗಾಯಿತ್ರಿನಗರ ಜನರ ನೆಮ್ಮದಿ ಕೆಡಿಸಿದ್ದಾರೆ. ಗಾಯಿತ್ರಿನಗರದಲ್ಲಿ 7 ಜನ ಬಿಹಾರಿ ಕೂಲಿ ಕಾರ್ಮಿಕರು ಕಾಣಿಸಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆಯೇ ಗಾಯಿತ್ರಿನಗರದ ರಸ್ತೆಗಳಲ್ಲಿ ಬಿಹಾರಿ ಮೂಲದ ಕಾರ್ಮಿಕರು ಓಡಾಟ ಮಾಡಿದ್ದಾರೆ. ಅದರಲ್ಲೂ ಗ್ರೀನ್ ಜೋನ್‍ನಲ್ಲಿ ಕಾಣಿಸಿಕೊಂಡ ಕೂಲಿ ಕಾರ್ಮಿಕರಿಂದ ಆತಂಕ ಹೆಚ್ಚಾಗಿದೆ. ಈ ಮೂಲಕ ಹೊಂಗಸಂದ್ರ ಮಾತ್ರವಲ್ಲದೆ ಬೆಂಗಳೂರಿನ ಗ್ರೀನ್‍ಜೋನ್ ಆಗಿದ್ದ ಜಾಗಕ್ಕೂ ಕೂಲಿ ಕಾರ್ಮಿಕರು ಬಂದಿದ್ದಾರೆ. ಬಿಹಾರಿ ಮೂಲದ ಕಾರ್ಮಿಕರು ಗಾಯಿತ್ರಿನಗರದಲ್ಲಿರುವ ಸ್ನೇಹಿತರ ರೂಮಿಗೆ ಬಂದಿದ್ದಾರೆ. ಏರಿಯಾದಲ್ಲಿ ಹೊಸಬರನ್ನ ನೋಡಿ ಜನರು ಆತಂಕಗೊಂಡಿದ್ದಾರೆ. ಆದರೆ ಇವರು ಹುಬ್ಬಳ್ಳಿಯಿಂದ ಬಂದಿದ್ದಾರೆ ಅನ್ನೋ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಈ  ಕಾರ್ಮಿಕರನ್ನು ಟೆಂಪೋವೊಂದರಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸದ್ಯಕ್ಕೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚೆಕ್ ಆಪ್ ನಡೆಯುತ್ತಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಹೆಚ್ ಡಿಕೆ ಪರ ಹೆಚ್ ,ಕೆ.ಪಾಟೀಲ್ ಬ್ಯಾಟಿಂಗ್

Sat Apr 25 , 2020
ಗದಗ: ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಭದ್ರತೆ ಬಗ್ಗೆ ಕಾಳಜಿ ವಹಿಸಿದ್ದು ತಪ್ಪಲ್ಲ. ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಪಾದರಾಯನಪುರ ಆರೋಪಿಗಳ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಭದ್ರತೆ ಬಗ್ಗೆ ಕಾಳಜಿ ವಹಿಸಿದ್ದು ತಪ್ಪಲ್ಲ. ಗ್ರೀನ್ ಝೋನ್ ಜಿಲ್ಲೆಗೆ ಆರೋಪಿಗಳನ್ನು ಸ್ಥಳಾಂತರಿಸಿದ್ದು ತಪ್ಪು. ಹಾಗಾಗಿ ರಾಮನಗರ ಜನರ ಹಿತದೃಷ್ಟಿಯಿಂದ ಕುಮಾರಸ್ವಾಮಿ ಹೇಳಿಕೆ ಸರಿಯಿದೆ. ಇದು ರಾಜಕೀಯ […]

Advertisement

Wordpress Social Share Plugin powered by Ultimatelysocial