ದೇವದುರ್ಗ : ರಂಜಾನ್ ಹಬ್ಬದ ಪ್ರಯುಕ್ತ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಖುರ್ಷಿದ್ ಪಾಟೀಲ್ ಬಡವರಿಗೆ ಆಹಾರ ಕಿಟ್ ವಿತರಿಸಿ, ಮಾತನಾಡಿದರು. ವೈದ್ಯಾಧಿಕಾರಿ ಡಾಕ್ಟರ್ ಆರ್ ಎಸ್ ಹುಲಿಮನಿ ಅವರು ಮಾತನಾಡಿ ಕೊರೊನಾ ವೈರಸ್ ದೇಶಾದ್ಯಂತ ವೇಗವಾಗಿ ಹರಡುತ್ತಿದ್ದು ಜನರನ್ನು ತಲ್ಲಣಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಬಡ ಜನರಿಗೆ ದುಡಿಯಲು ಕೆಲಸವಿಲ್ಲದೆ, ಒಪತ್ತಿನ ಗಂಜಿಗೂ ಕಷ್ಟ ಪಡುವಂತಾಗಿದೆ. ದುಡಿಯುವ ಕೈಗಳನ್ನು ಕೊರೊನಾ ಕಟ್ಟಿ ಹಾಕಿದೆ. ಹೀಗಾಗಿ ಇಂತಹವರ ಕಷ್ಟ ಮನಗೊಂಡು ಗ್ರಾಮ ಪಂಚಾಯಿತಿ ಸದಸ್ಯ ಖುರ್ಷಿದ್ ಪಾಟೀಲ್ ಅವರು ಆಹಾರ ಕಿಟ್ ವಿತರಣೆ ಮಾಡಿದ್ದು, ಹೆಮ್ಮೆಯ ಸಂಗತಿ. ಹಳ್ಳಿಗಳಿಗೆ ಪೂನಾ ಬಾಂಬೆ ಬೆಂಗಳೂರುನಿಂದ ಬಂದಂತಹ ಜನರು ಇದ್ದರೆ ನಮ್ಮಗೆ ತಿಳಿಸಿ ಅಂತವರನ್ನು ಕರೆದುಕೊಂಡು ಬರುತ್ತೇವೆ ಅವರನ್ನು ಕ್ವಾರಟೈನಲ್ಲಿ ಇಡುತ್ತೇವೆ ಇದು ಬಿಸಿಲು ನಾಡು ರಾಯಚೂರು ನಮ್ಮಗೆ ಕರೋನ ಬರಲ್ಲ ಅಂತ ಸುಮ್ಮನೆ ಇರಬೇಡಿ. ಈಗಾಗಲೇ ಒಟ್ಟು 26 ಜನರಿಗೆ ನಮ್ಮ ರಾಯಚೂರಿನಲ್ಲಿ ಕರೋನ ಬಂದಿದೆ ಎಂದು ಕರೋನ ಇವರಿಗೆ ಬರಬೇಕು ಅಂತ ಬರಲ್ಲ ಯಾರಿಗೂ ಆದರೂ ಬರುತ್ತದೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಗ್ರಾಮದ ಮುಖಂಡರು ಇತರರು ಇದ್ದರು.