ಗುವಾಹಟಿ :ಶುಕ್ರವಾರ ಅಸ್ಸಾಂನ ತರಕಾರಿ ವ್ಯಾಪಾರಿಯೊಬ್ಬರು ತಮ್ಮ ಉಳಿತಾಯದ ಹಣದಿಂದ ದ್ವಿಚಕ್ರ ವಾಹನವನ್ನು ಖರೀದಿಸಿದರು. ಅವರು ಮೂಟೆ ತುಂಬಾ ಸುಮಾರು 22 ಸಾವಿರ ರೂಪಾಯಿಯ ಕಾಯಿನ್ ಗಳನ್ನು ಶೋರೂಂಗೆ ತಂದು ಕೊಟ್ಟಿದ್ದಾರೆ.ಬಾರ್ಪೇಟಾದ ತರಕಾರಿ ಮಾರಾಟಗಾರರಾದ ಹಫೀಜುರ್ ಅಖಂಡ್ ‘ನಾನು ದ್ವಿಚಕ್ರ ವಾಹನವನ್ನು ಖರೀದಿಸಲು ಬಯಸಿದ್ದೆ, ಆದರೆ ಅದರ ಬೆಲೆ ತುಂಬಾ ಹೆಚ್ಚಾಗಿತ್ತು, ಹಾಗಾಗಿ ಪ್ರತಿ ದಿನ ಚಿಲ್ಲರೆ ಹಣವನ್ನು ಉಳಿಸುತ್ತಾ ಬಂದೆ’ ಎಂದರು.’ನಾನು ಸುಮಾರು ಒಂದು ವರ್ಷದವರೆಗೆ ನಾಣ್ಯಗಳನ್ನು ಉಳಿಸಲು ಪ್ರಾರಂಭಿಸಿದೆ ಮತ್ತು ದ್ವಿಚಕ್ರ ವಾಹನ ಕಂಪನಿಯ ಶೋರೂಂನ್ನು ಸಂಪರ್ಕಿಸಿದೆ ಮತ್ತು ನಾಣ್ಯಗಳಲ್ಲಿ ನನ್ನ ಉಳಿತಾಯದ ಬಗ್ಗೆ ಹೇಳಿದೆ.ನಂತರ ಅವರು ನಾಣ್ಯಗಳನ್ನು ಎಣಿಸಲು ತಮ್ಮ ಶೋರೂಮ್ಗೆ ತೆಗೆದುಕೊಂಡು ಹೋದರು ಮತ್ತು ಮೊತ್ತವು ರೂ. 22,000, ಆಗಿತ್ತು’ ಎಂದು ತರಕಾರಿ ಮಾರಾಟಗಾರ ಹೇಳಿದನು.’ನಾಣ್ಯ ತುಂಬಿದ ಚೀಲವನ್ನು ಎಣಿಸಲು ನಮಗೆ ಎರಡರಿಂದ ಮೂರು ಗಂಟೆ ಬೇಕಾಯಿತು. ನಾವು ದ್ವಿಚಕ್ರ ವಾಹನದ ಪಾವತಿಯನ್ನು ನಾಣ್ಯಗಳಲ್ಲಿ ಸ್ವೀಕರಿಸಿದ್ದೇವೆ ಮತ್ತು ಉಳಿದ ಮೊತ್ತವನ್ನು ಫೈನಾನ್ಸಿಂಗ್ ಮೂಲಕ ಪಾವತಿಸಲಾಗಿದೆ ‘ ಎಂದು ಶೋರೂಮ್ನ ಹಿರಿಯ ಸಿಬ್ಬಂದಿ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada