ಲಂಚ ಸ್ವೀಕಾರ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಎಸಿಪಿ ಪ್ರಭುಶಂಕರ್ ರನ್ನು ಸಿಸಿಬಿಯಿಂದ ವರ್ಗಾವಣೆ ಮಾಡಲಾಗಿದೆ. ರೇಡ್ ಮಾಡಿ ಪ್ರಕರಣ ಮುಚ್ಚಿ ಹಾಕಲು ಸಿಗರೇಟ್ ಡೀಲರ್ ಗಳಿಂದ ಪ್ರಭುಶಂಕರ್ 60 ಲಕ್ಷರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಸಿಸಿಬಿ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕಮಿಷನರ್ ಗೆ ವರದಿ ಸಲ್ಲಿಸಿದ್ದಾರೆ. ಕಾನೂನಿನ ಮುಂದೆ ಎಲ್ರೂ ಒಂದೇ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡೋದು ಸರಿಯಲ್ಲ. ಇಷ್ಟಾದರೂ ಎಸಿಪಿಯನ್ನು ಅಮಾನತ್ತು ಮಾಡದೆ ವರ್ಗಾವಣೆ ಮಾಡಿರುವ ಕಮಿಷನರ್. ಲಂಚ ಪಡೆದಿರೋದು ಸಾಬೀತಾದ ಬೆನ್ನಲ್ಲೇ ಪ್ರಭುಶಂಕರ್ ರನ್ನು ಸಿಸಿಬಿಯಿಂದ ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ವರದಿ:ಕ್ರೈಂ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ