ಹುಣಸೂರು: ಗುಂಡೇಟಿಗೆ ಕಾಡಾನೆಯೊಂದು ಬಲಿಯಾಗಿರುವ ಘಟನೆ ನಾಗರಹೊಳೆ ಉದ್ಯಾನದ ಆನೆಚೌಕೂರು ಮೀಸಲು ಅರಣ್ಯದಂಚಿನ ಸೂಳಗೋಡು ಗ್ರಾಮದಲ್ಲಿ
ನಡೆದಿದೆ.
ಕಾಡಂಚಿನಿಂದ ಸುಮಾರು 500 ಮೀಟರ್ ದೂರದ ಪಿರಿಯಾಪಟ್ಟಣ ತಾಲೂಕಿನ ಸೂಳಗೋಡು ಗ್ರಾಮದ ಚಿಕ್ಕೇಗೌಡರ ಪುತ್ರ ರೇವಣ್ಣರ ಜಮೀನಿನಲ್ಲಿ ಸುಮಾರು 20 ವರ್ಷದ ಹೆಣ್ಣಾನೆ ಶವ ಪತ್ತೆಯಾಗಿದೆ.
ನಾಗರಹೊಳೆ ಉದ್ಯಾನದಿಂದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯಿಂದ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ಸುಮಾರು 4-5 ಆನೆಗಳ ಹಿಂಡಿನಲ್ಲಿದ್ದ ಈ ಹೆಣ್ಣಾನೆಗೆ ಗುಂಡೇಟು ತಗುಲಿದ್ದು, ಸಾವನ್ನಪ್ಪಿದೆ.
ವಿಷಯ ತಿಳಿದು ಆರ್.ಎಫ್.ಓ. ಹನುಮಂತರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ. ಪಶುವೈದ್ಯ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆಂದು ಎಸಿಎಫ್ ಸತೀಶ್ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada