ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ಗೂಡ್ಸ್ ವಾಹನವೊಂದು ರಭಸದಿಂದ ಗುದ್ದಿದ ಪರಿಣಾಮ ಪೇದೆ ಗಂಭೀರವಾಗಿ ಗಾಯಗೊಂಡಿದ್ದ. ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡ ಪೇದೆಯನ್ನು ಆಸ್ಪತ್ರೆಗೆ ಸಾಗಿಸುವ ಮರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ರಾಯಬಾಗ ತಾಲ್ಲೂಕಿನ ಕೋಳಿಗುಡ್ಡ ಗ್ರಾಮದ ಶಿವಪ್ಪ ನಾಮದೇವ್ ಕೋಳಿ ಮೃತಪಟ್ಟ ಪೇದೆ. ಕೋಳಿಗುಡ್ಡ ಗ್ರಾಮದ ರ್ಕಾರಿ ಶಾಲೆಯಲ್ಲಿ ಪರ್ಥಿವ ಶರೀರವನ್ನು ಸರ್ವಜನಿಕ ರ್ಶನಕ್ಕೆ ಇಟ್ಟು ಅಂತಿಮ ನಮನ ಸಲ್ಲಿಸಲಾಯಿತು.
ನಂತರ ಪೇದೆಯ ಹುಟ್ಟೂರಾದ ಅಥಣಿ ತಾಲ್ಲೂಕಿನ ಮುರುಗುಂಡಿ ಗ್ರಾಮಕ್ಕೆ ಮೃತ ದೇಹವನ್ನು ತೆಗೆದುಕೊಂಡು ಹೋಗಲಾಗಿಯಿತು. ಆನಂತರ ಪೊಲೀಸರು ಮೌನಾಚರಣೆ ಮಾಡಿ ಮೂರು ಸುತ್ತಿನ ಗಾಳಿಯಲ್ಲಿ ಗುಂಡು ಹಾರಿಸಿದರು ನಂತರ ಮೃತ ಪೇದೆಗೆ ಕುಡಚಿ ಶಾಸಕ ಪಿ ರಾಜೀವ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರಸಿಂಗ್ ರೆಡ್ಡಿ. ಅಥಣಿ ಡಿವೈಎಸ್ಪಿ ಎಸ್. ವಿ ಗಿರೀಶ್. ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣ್ ಗೌಡ ಪಾಟೀಲ್ ಗೌರವರ್ಪಣೆಯನ್ನುಸಲ್ಲಿಸಿದರು.