ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡ ಪೇದೆ -ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟ ಪೇದೆ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ಗೂಡ್ಸ್ ವಾಹನವೊಂದು ರಭಸದಿಂದ ಗುದ್ದಿದ ಪರಿಣಾಮ ಪೇದೆ ಗಂಭೀರವಾಗಿ ಗಾಯಗೊಂಡಿದ್ದ. ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡ ಪೇದೆಯನ್ನು ಆಸ್ಪತ್ರೆಗೆ ಸಾಗಿಸುವ ಮರ‍್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ರಾಯಬಾಗ ತಾಲ್ಲೂಕಿನ ಕೋಳಿಗುಡ್ಡ ಗ್ರಾಮದ ಶಿವಪ್ಪ ನಾಮದೇವ್ ಕೋಳಿ ಮೃತಪಟ್ಟ ಪೇದೆ. ಕೋಳಿಗುಡ್ಡ ಗ್ರಾಮದ ರ‍್ಕಾರಿ ಶಾಲೆಯಲ್ಲಿ ಪರ‍್ಥಿವ ಶರೀರವನ್ನು ಸರ‍್ವಜನಿಕ ರ‍್ಶನಕ್ಕೆ ಇಟ್ಟು ಅಂತಿಮ ನಮನ ಸಲ್ಲಿಸಲಾಯಿತು.

ನಂತರ ಪೇದೆಯ ಹುಟ್ಟೂರಾದ ಅಥಣಿ ತಾಲ್ಲೂಕಿನ ಮುರುಗುಂಡಿ ಗ್ರಾಮಕ್ಕೆ ಮೃತ ದೇಹವನ್ನು ತೆಗೆದುಕೊಂಡು ಹೋಗಲಾಗಿಯಿತು. ಆನಂತರ ಪೊಲೀಸರು ಮೌನಾಚರಣೆ ಮಾಡಿ ಮೂರು ಸುತ್ತಿನ ಗಾಳಿಯಲ್ಲಿ ಗುಂಡು ಹಾರಿಸಿದರು ನಂತರ ಮೃತ ಪೇದೆಗೆ ಕುಡಚಿ ಶಾಸಕ ಪಿ ರಾಜೀವ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರಸಿಂಗ್ ರೆಡ್ಡಿ. ಅಥಣಿ ಡಿವೈಎಸ್ಪಿ ಎಸ್. ವಿ ಗಿರೀಶ್. ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣ್ ಗೌಡ ಪಾಟೀಲ್ ಗೌರವರ‍್ಪಣೆಯನ್ನುಸಲ್ಲಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ರಾಮ ಮಂದಿರ ಶಿಲಾನ್ಯಾಸ ಅತ್ಯಂತ ಸಂತಸದ ವಿಚಾರ

Sat Aug 1 , 2020
ಆಗಸ್ಟ್ ೫ ರಂದು ನಡೆಯಲಿರುವ ಅಯೋಧ್ಯೆಯ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಯುಪಿ ಮಾಜಿ ಸಿಎಂ ಕಲ್ಯಾಣ್ ಸಿಂಗ್ ‘ಆಗಸ್ಟ್ ೫ ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಆಗಸ್ಟ್ ೪ರಂದು ನಾನು ಅಯೋದ್ಯೆಗೆ ತಲುಪಿ, ಮರುದಿನ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದೇನೆ. ಇದು ನನಗೆ ಅತ್ಯಂತ ಸಂತಸ ತರುವ ವಿಚಾರವಾಗಿದೆ’ ಎಂದು ಕಲ್ಯಾಣ್ ಸಿಂಗ್ ಹೇಳಿದ್ದಾರೆ. ೧೯೯೨ ರಲ್ಲಿ ನಡೆದ […]

Advertisement

Wordpress Social Share Plugin powered by Ultimatelysocial