ಇಸ್ಲಾಮಾಬಾದ್ನಲ್ಲಿರುವ ಭಾರತೀಯ ದೂತಾವಾಸದ ಇಬ್ಬರು ಭದ್ರತಾ ಸಿಬಂದಿಯನ್ನು ಅಪಹರಿಸಿದ್ದ ಪಾಕ್ ಗುಪ್ತಚರ ಏಜೆನ್ಸಿ ಐಎಸ್ಐಯ ದುರುಳರು ಅವರಿಗೆ ಚಿತ್ರಹಿಂಸೆ ನೀಡಿರುವುದು ಈಗ ಬಹಿರಂಗವಾಗಿದೆ. ಈ ಬಗ್ಗೆ ಆಕ್ರೋಶಗೊಂಡಿರುವ ಭಾರತವು ಈ ಘಟನೆ ಯಿಂದ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಪಾಕ್ ಜತೆಗಿನ ರಾಜತಾಂತ್ರಿಕ ಸಂಬAಧ ಕಡಿದುಕೊಳ್ಳುವ ಗಂಭೀರ ಎಚ್ಚರಿಕೆ ರವಾನಿಸಿದೆ. ಭಾರತೀಯ ದೂತಾವಾಸದ ಇಬ್ಬರು ಭದ್ರತಾ ಸಿಬಂದಿಯಯನ್ನು ಹಿಂಬಾಲಿಸಿ ಅಪಹರಿಸಿದ್ದ ಐಎಸ್ಐಯ ಅಧಿಕಾರಿಗಳು ಇಡೀ ದಿನ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ. ಭಾರತೀಯ ದೂತಾವಾಸದ ಅಧಿಕಾರಿಗಳ ಕೆಲಸದ ವಿವರ ಕಲೆ ಹಾಕಲು ಪ್ರಯತ್ನಿಸಿ ರಾಡ್ನಿಂದ ಥಳಿಸಿದ್ದಾರೆ. ಕುಡಿಯಲು ಕೊಳಚೆ ನೀರನ್ನು ನೀಡಿದ್ದಾರೆ. ಸಿಬಂದಿಯ ದೇಹದಲ್ಲಿ ಗಾಯಗಳುಂಟಾದ ಬಳಿಕ ಮುಖ ಮರೆಸಿಕೊಳ್ಳಲು ಅಪಘಾತದ ಕಥೆ ಕಟ್ಟಿದ್ದಾರೆ ಎಂದು ಕೆಲವು ಪಾಕ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಭಾರತ ಈ ಮಾಹಿತಿ ಬಹಿರಂಗಗೊಳ್ಳುತ್ತಲೇ ಕ್ರುದ್ಧವಾಗಿರುವ ಭಾರತವು, ಈ ಘಟನೆ ಯಿಂದ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಪಾಕ್ ಜತೆಗಿನ ರಾಜತಾಂತ್ರಿಕ ಸಂಬAಧವನ್ನೇ ಕಡಿದುಕೊಳ್ಳಬೇಕಾದೀತು ಎಂದು ಎಚ್ಚರಿಸಿದೆ.
ಅಪಹೃತ ಸಿಬ್ಬಂದಿsಗೆ ಹಿಂಸೆ
Please follow and like us: