ಅರಸೀಕೆರೆ. ನಗರದ ರವಿ.ಡಿ.ಚನ್ನಣ್ಣನವರ್ ಅಭಿಮಾನಿ ಬಳಗದಿಂದ ಅವರ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಹಾಗೂ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಮಾಲರಿಗೆ ಮಾಸ್ಕ್ ವಿತರಿಸಿದರು .ಈ ಸಂದರ್ಭ ದಲ್ಲಿ ತಾಲ್ಲೂಕು ರವಿ.ಡಿ.ಚನ್ನಣ್ಣನವರ್ ನವರ ಅಭಿಮಾನಿ ಬಳಗದ ಅಧ್ಯಕ್ಷ ಮಂಜು .ಎನ್.ಗಂಗಾಧರ್ ಮಾತನಾಡಿ ನಮ್ಮ ಹಾಸನ ಜಿಲ್ಲೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಜನ ಸಾಮಾನ್ಯರಿಗೆ ಕಡು ಬಡವರಿಗೆ ಉತ್ತಮ ಮಾರ್ಗದರ್ಶನ ನೀಡಿ ಇಡಿ ಜಿಲ್ಲೆಯಲ್ಲೇ ಹೆಸರು ಮಾಡಿದ ಶ್ರೀಯುತರು ಮತ್ತೆ ಈ ಜಿಲ್ಲೆಗೆ ಬರಲಿ ಅವರ ಸೇವೆ ನಮ್ಮ ಜಿಲ್ಲೆಗೆ ಬೇಕಾಗಿದೆ ಎಂದರು. ಕಾರ್ಯದರ್ಶಿ ಆದರ್ಶ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ರಾಜ್ಯ ಹಾಗು ಹೊರ ರಾಜ್ಯಗಳಲ್ಲಿ ಕೂಡಾ ಹೆಸರು ಮಾಡಿದ್ದಾರೆ ಅತಂಹ ವ್ಯಕ್ತಿ ಯ ಹುಟ್ಟು ಹಬ್ಬ ಆಚರಿಸುವುದು ನಮ್ಮ ಸೌಭಾಗ್ಯ ಎಂದು ಹೇಳಿದ್ದಾರೆ. ಈ ಸಂದರ್ಭ ದಲ್ಲಿ ಗೌರವ ಅಧ್ಯಕ್ಷ ಸ್ವಾಮಿ. ಮನನ್.ಶಶಿಕುಮಾರ್. ಮಂಜುನಾಥ್ ಷಡಕ್ಷರಿ. ಕಿಶನ್. ನಮಾಜ್ ವುಲ್ಲಾಖಾನ್ ರಾಜೇಶ್, ಸಂತೋಷ್ ಉಪಸ್ಥಿತರಿದ್ದರು.