ಅಥಣಿ ಆರೋಗ್ಯ ಇಲಾಖೆಯ ಮೇಲೆ ಕೊರೊನಾ ಸೋಂಕಿತನ ಗಂಭೀರ ಆರೋಪ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದಾಗ ಒಂದೊಂದು ಸಲ ಒಂದೊಂದು ರೀತಿಯ ಫಲಿತಾಂಶವನ್ನು ಆರೋಗ್ಯ ಇಲಾಖೆಯವರು ನೀಡುತ್ತಿದ್ದಾರೆ. ಒಮ್ಮೆ ಪಾಸಿಟಿವ್ ನೀಡಿದರೆ, ಮರುದಿನವೇ ನೆಗೆಟಿವ್ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬರುತ್ತಿರುವ ಕೋಟ್ಯಾಂತರ ರೂಪಾಯಿ ಅನುದಾನವನ್ನು ಲೂಟಿ ಹೊಡೆಯಲು ಹೀಗೆ ಮಾಡುತ್ತಿದ್ದಾರೆ ಎಂದು ಇಲ್ಲಿನ ಹಿಪ್ಪರಗಿ ಗಲ್ಲಿಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಪಟ್ಟಣದಲ್ಲಿ ತಾಲ್ಲೂಕು ವೈದ್ಯಾಧಿಕಾರಿಯ ಜೊತೆ ಮಾತನಾಡಿದ ಅವರು, ಇದೇ ತಿಂಗಳು 15ರಂದು ಅಥಣಿಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದೆ. ವರದಿ ಬರುವುದು ಬಾಕಿ ಇತ್ತು. ಮರುದಿನ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಹೋಗಿ ಮತ್ತೊಮ್ಮೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದಿತ್ತು. ಆದರೆ, ಅಥಣಿಯಲ್ಲಿ ಮಾಡಿಸಿದ್ದ ವರದಿ ಶನಿವಾರ ಬಂದಿದ್ದು, ಇದರಲ್ಲಿ ಪಾಸಿಟಿವ್ ಇದೆ. ಇದು ಹೇಗೆ ಸಾಧ್ಯ? ಮೊದಲು ಪರೀಕ್ಷೆ ಮಾಡಿಸಿದ್ದಾಗ ಸೋಂಕು ಇದ್ದಿದ್ದರೆ, ಎರಡನೇ ಬಾರಿ ಮಾಡಿಸಿದ್ದಾಗಲೂ ಪಾಸಿಟಿವ್ ಬರಬೇಕಾಗಿತ್ತು. ಆದರೆ, ನೆಗೆಟಿವ್ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದರು.
ಆರೋಗ್ಯ ಇಲಾಖೆಯ ಮೇಲೆ ಕೊರೊನಾ ಸೋಂಕಿತನ ಆರೋಪ
Please follow and like us: