ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ದಿನೇದಿನೆ ಹೆಚ್ಚಾಗುತ್ತಲೆ ಸಾಗಿದೆ. ಅದ್ರಲ್ಲೂ ಬೆಂಗಳೂರಿನ ೮ ವಲಯಗಳ ಪೈಕಿ ದಕ್ಷಿಣ ವಲಯದಲ್ಲಿಯೇ ಅತ್ಯಂತ ಹೆಚ್ಚು ಸೋಂಕಿತರು ಪತ್ತಿಯಾಗುತ್ತಿದ್ದಾರೆ.ಹೀಗಾಗಿ ಕಂದಾಯ ಹಾಗೂ ಬೆಂಗಳೂರು ದಕ್ಷಿಣ ವಲಯದ ಕೋವಿಡ್-೧೯ ಉಸ್ತುವಾರಿ ಸಚಿವ ಆರ್.ಅಶೋಕ್ಗೆ ತೆಲೆನೋವು ತಂದಿಟ್ಟಿದೆ. ನಗರದ ಸೋಂಕಿತರ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು, ಆರ್.ಅಶೋಕ್ ಉಸ್ತುವಾರಿ ವಹಿಸಿಕೊಂಡಿರುವ ದಕ್ಷಿಣ ವಲಯದಲ್ಲೇ ಪತ್ತೆಯಾಗಿವೆ ಎನ್ನಲಾಗ್ತಿದೆ. ಮೂರು ಮಾರುಕಟ್ಟೆಗಳು,ಅತ್ಯಂತ ಹೆಚ್ಚು ವಾರ್ಡ್ಗಳು,ವಿಧಾನಸಭಾ ಕ್ಷೇತ್ರಗಳು,ಕಂಟೈನ್ಮೆAಟ್ ಝೋನ್ಗಳು ಬೆಂಗಳೂರು ದಕ್ಷಿಣ ವಲಯದಲ್ಲಿವೆ. ಕೆ.ಆರ್ . ಮಾರ್ಕಟ್,ಜಯನಗರ ಮಾರ್ಕೆಟ್,ಗಾಂಧಿಬಜಾರ್ ಮಾರ್ಕೆಟ್ಗಳು ಸೇರಿದಂತೆ ವ್ಯಾಪಾರ ವಹಿವಾಟುಗಳು ಹೆಚ್ಚಾಗಿ ನಡೆಯುವುದೇ ದಕ್ಷಿಣ ವಲಯದಲ್ಲಿ. ಬೊಮ್ಮನಹಳ್ಳಿ.ಜಯನಗರ,ಬಿಟಿಎಂಲೇಔಟ್,ಪದ್ಮನಾಭನಗರ,ಬಸವನಗುಡಿ,ವಿಜಯನಗರ,ಚಿಕ್ಕಪೇಟೆ ಕ್ಷೇತ್ರಗಳು ಈ ವಲಂiÀiದ ವ್ಯಾಪ್ತಿಯಲ್ಲಿ ಬರುತ್ತವೆ. ೪೪ ವಾರ್ಡಗಳು.೯೫೦ಕ್ಕೂ ಹೆಚ್ಚು ಕಂಟೈನ್ಮೆAಟ್ ಜೋನ್ಗಳು,೬೦೦ಕ್ಕೂ ಹೆಚ್ಚು ಸೀಲ್ಡೌನ್ ಪ್ರದೇಶಗಳು ಇಲ್ಲಿವೆ.
ಆರ್ ಅಶೋಕ್ಗೆ ಕಗ್ಗಂಟಾದ ಬೆಂಗಳೂರು ದಕ್ಷಿಣ
Please follow and like us: