ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಸದ್ದು ಮಾಡಿದ ಪೊಲೀಸ್ ತುಪಾಕಿ ರೌಡಿಶೀಟರ್ ನರಸಿಂಹ ರೆಡ್ಡಿ ಮೇಲೆ ಫೈರಿಂಗ್ ಮಾಡಿದ್ದು , ಗಿರಿನಗರದ ಪಿಎಸ್ಐ ಸುನೀಲ್ ಕಡ್ಡಿಯಿಂದ ಶೂಟೌಟ್ ಕಾಲಿಗೆ ಗುಂಡು ಹಾರಿಸಲಾಗಿದೆ . ಕೊಲೆ,ದರೋಡೆ,ಕಿಡ್ನಾಪ್,ಮನೆಗಳ್ಳತನ ಹೀಗೆ 30 ಕ್ಕೂ ಹೆಚ್ಚು ಪ್ರಕರಣದಲ್ಲಿ ಆರೋಪಿಯಾಗಿದ್ದ ಆಸಾಮಿ ಇತ್ತೀಚೆಗೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಆರೋಪಿ ಹೊಸಕೆರೆಹಳ್ಳಿ ಕೆರೆ ಕೋಡಿ ಬಳಿ ಇರುವ ಮಾಹಿತಿ ಪಡೆದಿದ್ದ ,ಗಿರಿನಗರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧನಕ್ಕೆ ತೆರಳಿದ್ದ ವೇಳೆ ಎಸ್ಕೇಪ್ ಆಗಲು ಯತ್ನಿಸಿದ್ದು, ಆರೋಪಿ ಕಾನ್ಸ್ ಟೇಬಲ್ ಮೋಹನ್ ಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಲು ಪ್ರಯತ್ನಸಿದ್ದ , ಅಲ್ಲದೇ ಪಿಎಸ್ಐ ಸುನೀಲ್ ರೆಡ್ಡಿ ಮೇಲು ಹಲ್ಲೆಗೆ ಯತ್ನಿಸಲಾಗಿದೆ ಎಂದು ತಿಳಿಸಲಾಗಿದೆ.ಗಾಳಿಯಲ್ಲಿ ಗುಂಡು ಹಾರಿಸಿ ವಾರ್ನ್ ಮಾಡಿದ್ದ ಪಿಎಸ್ಐ ಮಾತು ಕೇಳದಿದ್ದಾಗ ಬಲಗಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಲಾಗಿದೆ, ಗಾಯಾಳು ಪಿಸಿ ಹಾಗೂ ಆರೋಪಿ ಮೋಹನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada