ಎಲ್ಲರ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿದೆ

ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವವರಲ್ಲಿ ಯಾರಾದರೂ ಸತ್ಯ ಹರಿಶ್ಚಂದ್ರ ಇದ್ದಾರಾ? ಎಲ್ಲರ ಅವಧಿಯಲ್ಲೂ ಭ್ರಷ್ಟಾಚಾರ, ಹಗರಣಗಳು ಆಗಿವೆ. ನೂತನವಾಗಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿರುವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ‌. ಹಿಂದಿನ ಮುಖ್ಯಮಂತ್ರಿಗಳ ಸಂದರ್ಭದಲ್ಲಿ ಏನೇನು ಹಗರಣ ಆಗಿದೆ ಅಂತ ಜನರಿಗೆ ಗೊತ್ತಿದೆ. ಯಾರೂ ಸತ್ಯಹರಿಶ್ಚಂದ್ರರಿಲ್ಲ, ಯಾರೂ ಸತ್ಯವಂತ ಧರ್ಮರಾಯರು ಇಲ್ಲ. ನಳ ಮಹಾರಾಜನಂತಹ ಸತ್ಯವಂತರು ಯಾರೂ ಇಲ್ಲ. ಎಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲೂ ಭ್ರಷ್ಟಾಚಾರ, ಹಗರಣಗಳು ಆಗಿವೆ. ಇದರ ಬಗ್ಗೆ ದಾಖಲೆಗಳು ಕೂಡ ಇವೆ. ಅದನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಕಾಡು ಸುತ್ತಿ, ಗಿಡ ನೆಟ್ಟ ದರ್ಶನ್-ಚಿಕ್ಕಣ

Mon Jul 27 , 2020
ಚಾಲೆಂಜಿ0ಗ್ ಸ್ಟಾರ್ ದರ್ಶನ್ ಹಾಗೂ ಹಾಸ್ಯನಟ ಚಿಕ್ಕಣ್ಣ ಜೊತೆಯಾಗಿ ಕಾಡು ಸುತ್ತಾಟ ನಡೆಸಿದ್ದಾರೆ. ಮಲೆಮಹದೇಶ್ವರ ವನ್ಯಧಾಮಲ್ಲಿ ಅರಣ್ಯ ಸಂಚಾರ ಮಾಡಿದ ಇಬ್ಬರೂ, ಕೊಳ್ಳೇಗಾಲದ ಬಫರ್ ವಲಯದಲ್ಲಿರುವ ದೊಡ್ಡಮಾಕಳಗೆ ವ್ಯಾಪ್ತಯಲ್ಲಿ ಎಪಿಸಿ ಶಿಬಿರಕ್ಕೆ ಭೇಟಿ ನೀಡಿ ವಾಚರ್‌ಗಳೊಂದಿಗೆ ಸಂವಾದ ನಡೆಸಿದರು. ಅರಣ್ಯ ಇಲಾಖೆಯ ಬ್ಯಾçಂಡ್ ಅಂಬಾಸಿಡರ್ ಆಗಿರುವ ದರ್ಶನ್, ಮಲೆಮಹದೇಶ್ವರ ವನ್ಯಧಾಮದ ಡಿಎಫ್‌ಓ ಕಚೇರಿ ಸಮೀಪ ಎರಡು ಗಿಡ ನೆಟ್ಟರು. ಈ ಮೂಲಕ ಕೃಷಿ ಅರಣ್ಯ ಚಾಲನೆ ನೀಡಿದರು ಎಂದು ಡಿಎಫ್‌ಓ […]

Advertisement

Wordpress Social Share Plugin powered by Ultimatelysocial