ಚಾಲೆಂಜಿ0ಗ್ ಸ್ಟಾರ್ ದರ್ಶನ್ ಹಾಗೂ ಹಾಸ್ಯನಟ ಚಿಕ್ಕಣ್ಣ ಜೊತೆಯಾಗಿ ಕಾಡು ಸುತ್ತಾಟ ನಡೆಸಿದ್ದಾರೆ. ಮಲೆಮಹದೇಶ್ವರ ವನ್ಯಧಾಮಲ್ಲಿ ಅರಣ್ಯ ಸಂಚಾರ ಮಾಡಿದ ಇಬ್ಬರೂ, ಕೊಳ್ಳೇಗಾಲದ ಬಫರ್ ವಲಯದಲ್ಲಿರುವ ದೊಡ್ಡಮಾಕಳಗೆ ವ್ಯಾಪ್ತಯಲ್ಲಿ ಎಪಿಸಿ ಶಿಬಿರಕ್ಕೆ ಭೇಟಿ ನೀಡಿ ವಾಚರ್ಗಳೊಂದಿಗೆ ಸಂವಾದ ನಡೆಸಿದರು. ಅರಣ್ಯ ಇಲಾಖೆಯ ಬ್ಯಾçಂಡ್ ಅಂಬಾಸಿಡರ್ ಆಗಿರುವ ದರ್ಶನ್, ಮಲೆಮಹದೇಶ್ವರ ವನ್ಯಧಾಮದ ಡಿಎಫ್ಓ ಕಚೇರಿ ಸಮೀಪ ಎರಡು ಗಿಡ ನೆಟ್ಟರು. ಈ ಮೂಲಕ ಕೃಷಿ ಅರಣ್ಯ ಚಾಲನೆ ನೀಡಿದರು ಎಂದು ಡಿಎಫ್ಓ ಎಡುಕೂಂಡಲು ಮಾಹಿತಿ ನೀಡಿದ್ದಾರೆ.
ಕಾಡು ಸುತ್ತಿ, ಗಿಡ ನೆಟ್ಟ ದರ್ಶನ್-ಚಿಕ್ಕಣ
Please follow and like us: