‘ಕಚ್ಚಾ ಬಾದಾಮ್’ ಹಾಡು ಸಖತ್ ವೈರಲ್!

 

ಕಚ್ಚಾ ಬಾದಾಮ್, ಕಚ್ಚಾ ಕಚ್ಚಾ ಬಾದಾಮ್ ಅನ್ನೋ ಹಾಡು ಈಗ ಸಖತ್ ಟ್ರೆಂಡಿಂಗ್‌ನಲ್ಲಿರೋ ಹಾಡು. ಇನ್‌ಸ್ಟಾಗ್ರಾಮ್‌ ರೀಲ್ಸ್‌ ಮಾಡೋರು, ಖಂಡಿತವಾಗಿಯೂ ಈ ಹಾಡಿಗೆ ಸ್ಟೆಪ್ ಹಾಕೇ ಹಾಕಿರ್ತಾರೆ. ಈ ಹಾಡು ಹಾಡಿದ್ದು ಯಾರು..? ಯಾವುದಕ್ಕಾಗಿ ಹಾಡಿದ್ದು, ಇದು ಫೇಮಸ್ ಆಗಿದ್ದಾದ್ರೂ ಹೇಗೆ.. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿರುವ ಶೇಂಗಾಕಾಳಿನ ಹಾಡು ಕಚ್ಚಾ ಬಾದಾಮ್. ಈ ಹಾಡಿ ಹಿಂದೆ ಇರೋದು ಒಬ್ಬ ಶೇಂಗಾ ಮಾರಾಟಗಾರನ ಕಥೆ. ಪಶ್ಚಿಮ ಬಂಗಾಳದ, ಭೀರ್‌ಭೌಮ್ ಜಿಲ್ಲೆಯ, ಲಕ್ಷ್ಮೀ ನಾರಾಯಣಪುರ ಪಂಚಾಯತ್‌ನ, ಕುರಲ್ಜುರಿ ಗ್ರಾಮದ ನಿವಾಸಿಯಾಗಿರುವ , ಭುವನ್ ಬಡ್ಯಾಕರ್ ಎಂಬುವವರು ಶೇಂಗಾ ಮಾರಾಟಗಾರರು. ತಮ್ಮ ಬಳಿ ಜನ ಬಂದು ಶೇಂಗಾ ತೆಗೆದುಕೊಳ್ಳಲಿ ಎಂಬು ಕಾರಣಕ್ಕೆ, ಜನರನ್ನು ತಮ್ಮತ್ತ ಸೆಳೆಯುವುದಕ್ಕೆ, ಈ ಭುವನ್ ಕಚ್ಚಾ ಬಾದಾಮ್ ಅನ್ನೋ ಹಾಡು ಹೇಳಿದ್ದರು. ಅಲ್ಲದೇ ಯಾವುದಾದರೂ ಬೆಲೆ ಬಾಳುವ ವಸ್ತು ಕೊಟ್ರೆ, ಅದಕ್ಕೆ ತಕ್ಕಷ್ಟು ಶೇಂಗಾಕಾಳನ್ನ ಭುವನ್ ನೀಡುತ್ತಾರೆ.ಭುವನ್ ಹಾಡನ್ನ ಒಂದು ಯೂಟ್ಯೂಬ್ ಚಾನೆಲ್‌ನವರು ಪ್ರಸಾರ ಮಾಡಿದ್ರು. ಅದಾದ ನಂತರ, ರೀಚತ್ ಎಂಬುವರು, ಈ ಹಾಡನ್ನ ಹಾಡಿ, ಇದಕ್ಕೆ ಟ್ಯೂನ್ ಮಾಡಿ, ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದಾರೆ. ಹಾಗಾಗಿ ಈಗ ಎಲ್ಲೆಲ್ಲೂ ಭುವನ್ ಹಾಡಿದ, ಕಚ್ಚಾ ಬಾದಾಮ್ ಹಾಡಿನದ್ದೇ ಗುಂಗು. ಆದ್ರೆ ಭುವನ್ ಈ ಹಾಡು ತುಂಬಾ ವೈರಲ್ ಆಗಿದೆ, ಇದರಿಂದ ಸಂಗ್ರಹವಾದ ದುಡ್ಡಿನಲ್ಲಿ ನನಗೂ ಸ್ವಲ್ಪ ಭಾಗ ಹಣ ನೀಡಿ ಸಹಾಯ ಮಾಡಬೇಕೆಂದು ಸ್ಥಳೀಯ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಲಕ್ನೋ ಪಟ್ಟಿಯಲ್ಲಿ ಅಪರ್ಣಾ ಯಾದವ್, ರೀಟಾ ಬಹುಗಣ ಅವರ ಪುತ್ರನ ಹೆಸರುಗಳು ನಾಪತ್ತೆಯಾಗಿದೆ

Wed Feb 2 , 2022
ಲಕ್ನೋ, ಫೆಬ್ರವರಿ 02: ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಲಕ್ನೋದ ಎಲ್ಲಾ ಒಂಬತ್ತು ಸ್ಥಾನಗಳಿಗೆ ಘೋಷಿಸಲಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಭಾಗವಾಗಿಲ್ಲ.ಬಿಜೆಪಿ ನಾಯಕಿ ರೀಟಾ ಬಹುಗಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ ಕೂಡ ಪಟ್ಟಿಯಲ್ಲಿಲ್ಲ.ಸ್ವಯಂ ನಿವೃತ್ತಿ ಸ್ವೀಕರಿಸಿದ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ರಾಜೇಶ್ವರ್ ಸಿಂಗ್ ಅವರಿಗೆ ಸರೋಜಿನಿ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿದೆ. […]

Advertisement

Wordpress Social Share Plugin powered by Ultimatelysocial