ಕೆ.ಗೋಪಾಲಯ್ಯ ನೇತೃತ್ವದಲ್ಲಿ  ಕೋವಿಡ್ ಕೇರ್‌ಸೆಂಟರ್

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕೋವಿಡ್-19 ಕೇಸ್ ಗಳ ಉತ್ತಮ ಚಿಕಿತ್ಸೆಗಾಗಿ ಆಹಾರ ಸಚಿವ ಹಾಗೂ ಸ್ಥಳೀಯ ಶಾಸಕರಾದ ಕೆ.ಗೋಪಾಲಯ್ಯ ರವರ ನೇತೃತ್ವದಲ್ಲಿ  ಸುಮಾರು 250 ಬೆಡ್ ಗಳ ಕೋವಿಡ್ ಕೇರ್ ಸೆಂಟರ್  ಗಳನ್ನು ತೆರೆದು ಮತ್ತು ಸೋಂಕು ನಿವಾರಕ ಸಿಂಪಡಿಸುವ ವಿನೂತನ ವಾಹನ ಸಿದ್ಧತೆ ಮಾಡಿದ್ದಾರೆ. ಬಸವೇಶ್ವರ ನಗರದ  ಶಂಕಮಠ  ಪ್ರಿಸ್ಟೈನ್ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಮತ್ತು  ಆಹಾರ ಸಚಿವ ಕೆ.ಗೋಪಾಲಯ್ಯ ಕೋವಿಡ್ ವಾರ್ಡ್ ಉದ್ಘಾಟನೆ ಮಾಡಿದ್ದರು. ನಮ್ಮ‌ ಕ್ಷೇತ್ರದ ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಲಾಗ್ತಾ ಇದೆ ಪ್ರಿಸ್ಟೀನ್ ಆಸ್ಪತ್ರೆಯಲ್ಲಿ ಇಂದು 150 ಬೆಡ್ ಗಳನ್ನ ನಿಯೋಜನೆ ಮಾಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ನಮ್ಮ ಸರ್ಕಾರ ಶ್ರಮಿಸುತ್ತಿದೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟಿçಯ ಹೆದ್ದಾರಿ ೭೫ರಲ್ಲಿ ಸರಣಿ ಅಪಘಾತ

Tue Jul 14 , 2020
ಕೋಲಾರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸರಣಿ ಅಪಘಾತ ನಡೆದಿದೆ. ಕೆಟ್ಟು ನಿಂತಿದ್ದ ಬುಲೋರೋ‌ ವಾಹನಕ್ಕೆ ಕಾರು, ಕ್ಯಾಂಟರ್, ಟ್ರಾಕ್ಟರ್  ಮತ್ತು ಎರಡು ಬೈಕ್ ಗಳು ಡಿಕ್ಕಿಯಾಗಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಮತ್ತು ಮೂವರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕೋಲಾರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಪಘಾತದ ಹಿನ್ನೆಲೆಯಲ್ಲಿ ‌ಬಂದಾಗಿದ್ದ ಹೆದ್ದಾರಿಯನ್ನು ಪೊಲೀಸರು ತೆರವು ಗೊಳಿಸಿದ್ದಾರೆ.   Please follow and […]

Advertisement

Wordpress Social Share Plugin powered by Ultimatelysocial