ಕೇರಳದ ಪ್ರಸಿದ್ಧ ಗುರುವಾಯೂರು ದೇಗುಲ: ಜಾತಿ ವಿವಾದಕ್ಕೆ ತೆರೆ.

ತಿರುವನಂತಪುರಂ: ಕೇರಳದ ಪ್ರಸಿದ್ಧ ಗುರುವಾಯೂರು ದೇಗುಲದದ ಉತ್ಸವದಲ್ಲಿ ಪ್ರಸಾದ ತಯಾರಿಕೆ ಮತ್ತು ಬಡಿಸುವ ವಿಚಾರದಲ್ಲಿ ಭುಗಿಲೆದ್ದಿದ್ದ ಜಾತಿ ವಿವಾದಕ್ಕೆ ತೆರೆ ಬಿದ್ದಿದೆ.ಹಾಗೆಯೇ “ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಉತ್ಸವ ಮಾಡದೆ, ಸರಳವಾಗಿ ನಡೆಸಲಾಗುವುದು. ಊಟ ಬಡಿಸುವ ಬದಲಾಗಿ 30000 ಜನರಿಗೆ ಪ್ರಸಾದದ ಕಿಟ್‌ ಕೊಡಲಾಗುವುದು’ ಎಂದು ದೇಗುಲದ ಮಂಡಳಿ ಮಾಹಿತಿ ಕೊಟ್ಟಿದೆ.ಪ್ರಸಾದವನ್ನು ಬ್ರಾಹ್ಮಣರೇ ತಯಾರಿಸಬೇಕೆಂಬ ನಿಯಮವನ್ನು ದೇಗುಲದ ಮಂಡಳಿ ಕೈ ಬಿಟ್ಟಿದೆ.ಫೆ.14ರಿಂದ 23ರವರೆಗೆ ಉತ್ಸವ ಜರುಗಲಿದ್ದು, ಅದಕ್ಕೆ ಬ್ರಾಹ್ಮಣರೇ ಪ್ರಸಾದ ತಯಾರಿಸಿ, ಊಟ ಬಡಿಸಬೇಕೆಂದು ಮಂಡಳಿ ಹೇಳಿತ್ತು. ಅದಕ್ಕೆಂದು ಟೆಂಡರ್‌ನೂ° ಕರೆಯಲಾಗಿತ್ತು. ಈ ವಿಚಾರದಲ್ಲಿ ವಿರೋಧ ವ್ಯಕ್ತವಾಗಿತ್ತು.ಕೊನೆಗೆ ಸಚಿವ ಕೆ.ರಾಧಾಕೃಷ್ಣನ್‌ ಅವರೂ ಮಧ್ಯೆ ಬಂದಿದ್ದು, ಬ್ರಾಹ್ಮಣರೇ ಪ್ರಸಾದ ತಯಾರಿಸಬೇಕೆಂಬ ನಿಯಮವನ್ನು ಕೈ ಬಿಡುವಂತೆ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಳಬಾಗಿಲು: ಅಮರಾಯಿ ಗುಂಡು ತೋಪು ಒತ್ತುವರಿ

Sun Jan 30 , 2022
ಮುಳಬಾಗಿಲು: ತಾಲ್ಲೂಕಿನ ಆವಣಿ ಹೋಬಳಿ ವಿ. ಗುಟ್ಟಹಳ್ಳಿ ವ್ಯಾಪ್ತಿಯ ವಿರೂಪಾಕ್ಷಿ ಗ್ರಾಮಕ್ಕೆ ಸೇರಿದ ಸರ್ವೆ ನಂ. 28ರಲ್ಲಿ 4 ಎಕರೆ ಮತ್ತು ಸರ್ವೆ ನಂ. 31ರ 37 ಗುಂಟೆ ಜಮೀನು ಒತ್ತುವರಿಯಾಗಿದ್ದು, ತೆರವುಗೊಳಿಸಲು ಸರ್ವೆ ನಡೆಸಲಾಯಿತು.ಈ ಜಮೀನು ಅಮರಾಯಿ ಗುಂಡು ತೋಪು ಪ್ರದೇಶವಾಗಿದೆ. ಇದನ್ನು ಖಾಸಗಿ ವ್ಯಕ್ತಿಗಳು ಉಳುಮೆ ಮಾಡುವುದು ನಿಷೇಧವಾಗಿದೆ. ಈ ಜಮೀನನ್ನು ಹಲವಾರು ವರ್ಷಗಳಿಂದ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ವಶಪಡಿಸಿಕೊಂಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ತಹಶೀಲ್ದಾರ್ ಶೋಭಿತಾ […]

Advertisement

Wordpress Social Share Plugin powered by Ultimatelysocial