ಮೂಲಭೂತ ಸೌಲಭ್ಯ ಕಲ್ಪಿಸಿ ಎಂದು ಮತದಾನ ಬಹಿಸ್ಕಾರ.!

ಚುನಾವಣೆ ಪ್ರಚಾರಕ್ಕೆ ಅಡ್ಡಿ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಯಿಲ್ಲ ಎಂದು ನಾಯಕ ಸಮುದಾಯದಿಂದ ಮತದಾನ ಬಹಿಷ್ಕಾರ ಮಾಡಿ ಪ್ರತಿಭಟನೆ. ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವ ಗ್ರಾಮಸ್ಥರು.

ಕುಡಿಯುವ ನೀರಿನ ಸಮಸ್ಯೆ, ರಸ್ತೆಯ ಸಮಸ್ಯೆ, ಕಸ ವಿಲೇವಾರಿ ಮಾಡಿಲ್ಲ, ಚರಂಡಿ ಸ್ವಚ್ಛತೆ ಮಾಡದೇ ರೋಗರುಜಿನ ಹರಡುತ್ತಿದೆ ಎಂದು ದೂರಿದರು. ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ,  ಮತ್ತು ಶಾಸಕರಿಗೆ ಹಲವಾರು ಭಾರಿ ದೂರು ನೀಡಿದರು ಪ್ರಯೋಜನ ಆಗಿಲ್ಲ,ಆಗಾಗಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದರು.

ಈ ಭಾರಿಯ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಲ್ಲರೂ ನಿರ್ಧಾರ ಮಾಡಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನವೀನ್ ಕುಮಾರ, ರಾಮಕೃಷ್ಣ, ನಾಗರಾಜು, ಗೋಪಾಲ ನಾಯಕ, ರಘು, ನಾಗಮ್ಮ,ವೆಂಕಟೇಶ್, ಶಾಂತಮ್ಮ, ರವಿ, ಮಹಾದೇವನಾಯಕ, ಸುರೇಶ್ ನಾಯಕ ಇತರರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚುನಾವಣಾ ಆಯೋಗಕ್ಕೆ ದೂರು ನೀಡಿದ ಶೋಭಾ ಕರಂದ್ಲಾಜೆ.!

Fri Apr 21 , 2023
ರಾಷ್ಟ್ರೀಯ ಕಾಂಗ್ರೆಸ್ ಹಣವನ್ನ‌ ತೆಗೆದುಕೊಂಡು ಅಪ್ಲಿಕೇಶನ್ ಕೊಟ್ಟು, ಬಿ ಫಾರ್ಮ್ ವಿತರಿಸಿದೆ. ಕಾಂಗ್ರೆಸ್ ಅಧ್ಯಕ್ಷರಾದ ಡಿಕೆಶಿ, ಯಾರು ಬಿ ಫಾರ್ಮ್ ಕೊಡಲು ನಿಯೋಜಿತರಾಗಿದ್ದಾರೆ. ಈವರೆಗೂ 1,350 ಅಪ್ಲಿಕೇಶನ್ ಬಂದಿದೆ. ಯಾರಿಗೆ ಕಾಂಗ್ರೆಸ್ ಪಕ್ಷದಿಂದ ಬಿ ಫಾರ್ಮ್ ಬೇಕು, ಅವರು ಅರ್ಜಿ ಹಾಕಬೇಕು. ಪ್ರತೀ ಅರ್ಜಿಗೆ 2ಲಕ್ಷ ಹಣ ಪಡೆದಿದ್ದೇವೆ‌. ಜನಪ್ರತಿನಿಧಿ ಕಾಯ್ದೆ 171d ಪ್ರಕಾರ. ಚುನಾವಣೆಯಲ್ಲಿ ಬಿ ಫಾರ್ಮ್ ಕೊಡಲು ಅಪ್ಲಿಕೇಶನ್ ಕೊಡಲು ಹಣ ಪಡೆಯುವಂತಿಲ್ಲ. ಇದು ಅಪರಾಧ ಆಗುತ್ತದೆ. […]

Advertisement

Wordpress Social Share Plugin powered by Ultimatelysocial