ಕೊರೊನಾ ವೈರಸ್ ಗೆ ಪ್ರತಿ ದಿನ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ ಆದರಿಂದ ಅನೇಕ ದೇಶಗಳು ಕೊರೊನಾ ವೈರಸ್ ಗೆ ಔಷದಿ ಕಂಡು ಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಇದೀಗ ಪತಂಜಲಿ ಯೋಗಗುರು ಬಾಬಾ ರಾಮ್ ದೇವ್ ಆಯುರ್ವೇದದಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿದಿರುವುದಾಗಿ ಹೇಳಿದ್ದಾರೆ. ಈ ಕುರಿತು ಹರಿದ್ವಾರದ ಪತಂಜಲಿ ಯೋಗ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾ ಡಿದ ಅವರು ಮಾರಣಾಂತಿಕ ಕೊರೊನಾ ಸೋಂಕಿಗೆ ಕೊರೋನಿಲ್ ಎಂಬ ಔಷಧದಿಂದ ಚಿಕಿತ್ಸೆ ನೀಡಬಹುದು ಎಂದು ತಿಳಿಸಿದರು. ಕೊರೋನಿಲ್ ಔಷಧದಿಂದ 280 ಸೋಂಕಿತರ ಮೇಲೆ ಈ ಔಷಧಿ ಪ್ರಯೋಗಿಸಿದ್ದು, ಈ ಪೈಕಿ ಮೂರು ದಿನದೊಳಗೆ ಶೇ.69ರಷ್ಟು ಸೋಂಕಿತರು ಚೇತರಿಸಿಕೊಳ್ಳುತ್ತಾರೆ. ಅಲ್ಲದೇ, ಏಳು ದಿನದೊಳಗೆ ಶೇ.100 ರಷ್ಟು ಸೋಂಕಿತರು ಚೇತರಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಇನ್ನೂ ಇದೆ ವೇಳೆ ಕೊರೋನಿಲ್ ಔಷಧಿಯನ್ನು ಕೂಡ ಬಿಡುಗಡೆ ಮಾಡಲಾಯಿತು.