ಕೊರೊನಾ ಪರಿಸ್ಥಿತಿ ನೆನಸಿಕೊಂಡ್ರೆ ನಡುಕ ಹುಟ್ಟಿಸುತ್ತೆ- ಉಗ್ರಪ್ಪ

ಕೊರೊನಾ ಪರಿಸ್ಥಿತಿ ನೆನಸಿಕೊಂಡ್ರೆ ಬಹಳ ದುಗುಡ, ನಡುಕ ಹುಟ್ಟಿಸುತ್ತಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಭಾರತ ೧೧ ನೇ ಸ್ಥಾನದಲ್ಲಿ ಇತ್ತು , ಈಗ ೩ ನೇ ಸ್ಥಾನಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆ ದಂತ ಗೋಪುರ ಬಿಟ್ಟು ಹೊರಗಡೆ ಬರುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ಕೃಷ್ಣಾ ಬಿಟ್ಟು ಹೊರಗಡೆ ಬರುತ್ತಿಲ್ಲ. ರೋಗಕ್ಕೆ ತುತ್ತಾದವರನ್ನು ಸಂತೈಸುವ ಕೆಲಸ ಮಾಡುತ್ತಿಲ್ಲ , ಅವರು ಕೇವಲ ಮೀಡಿಯಾಗೆ ಬ್ರೀಫ್ ಮಾಡುತ್ತಿದ್ದಾರೆ ಅಷ್ಟೇ. ಮೂರು ದಿನ ನಾಲ್ಕು ದಿನ ಆದ್ರು ಟೆಸ್ಟ್ ರಿಸಲ್ಟ್ ಸಿಗುತ್ತಿಲ್ಲ. ಆಂಬ್ಯುಲೆನ್ಸ್ ಸರಿಯಾಗಿ ಸಿಗುತ್ತಿಲ್ಲ, ನರಕ ಸದೃಶವಾದ ಘಟನೆ ಕಾಣುತ್ತಿವೆ. ಸಿಎಂ ಒಂದು ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ, ಮಂತ್ರಿಗಳು ಮಾಡುತ್ತಿಲ್ಲ. ಎಲ್ಲಿ ಲಂಚ ಸಿಗುತ್ತೆ ಅಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ಸಚಿವರು ಕಮಿಷನ್ ಪಡೆಯಬೇಕು ಎಂದು ಪೈಪೋಟಿ ನಡೆಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬಿಎಸ್‌ವೈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ

Mon Jul 6 , 2020
ಯಡಿಯೂರಪ್ಪ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.ಸುದ್ದಗೋಷ್ಟಿಯಲ್ಲಿ ಮತನಾಡಿದ ಅವರು, ಜನರಿಗೆ ಯಡಿಯೂರಪ್ಪ ಅವರು ಉತ್ತರದಾಯಿತ್ವ ಆಗಿದ್ದಾರೆ. ಯಾರಾದ್ರು ಒಬ್ಬರು ಡಾಕ್ಟರ್‌ನಲ್ಲಿ ಕಾನ್ಫಿಡೆನ್ಸ್ ಕ್ರಿಯೇಟ್ ಮಾಡುವುದಕ್ಕೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೀರಾ. ದುಡ್ಡು ಲೂಟಿ ಮಾಡಲು ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಜನರ ಪ್ರಾಣ ಉಳಿಸಬೇಕಿರುವುದು ರಾಜ್ಯ , ಕೇಂದ್ರ ಸರ್ಕಾರಗಳು. ದೇಶದ ಗಡಿ ಉಳಿಸುವುದಕ್ಕೆ ಮೋದಿ ಕೈನಲ್ಲಿ ಆಗಿಲ್ಲ. ಆರಂಭ ಶೂರತ್ವ ಇದ್ರೆ ಅದು ಬಿಜೆಪಿ […]

Advertisement

Wordpress Social Share Plugin powered by Ultimatelysocial