ಕೊರೊನಾ ಪರಿಸ್ಥಿತಿ ನೆನಸಿಕೊಂಡ್ರೆ ಬಹಳ ದುಗುಡ, ನಡುಕ ಹುಟ್ಟಿಸುತ್ತಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಭಾರತ ೧೧ ನೇ ಸ್ಥಾನದಲ್ಲಿ ಇತ್ತು , ಈಗ ೩ ನೇ ಸ್ಥಾನಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆ ದಂತ ಗೋಪುರ ಬಿಟ್ಟು ಹೊರಗಡೆ ಬರುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ಕೃಷ್ಣಾ ಬಿಟ್ಟು ಹೊರಗಡೆ ಬರುತ್ತಿಲ್ಲ. ರೋಗಕ್ಕೆ ತುತ್ತಾದವರನ್ನು ಸಂತೈಸುವ ಕೆಲಸ ಮಾಡುತ್ತಿಲ್ಲ , ಅವರು ಕೇವಲ ಮೀಡಿಯಾಗೆ ಬ್ರೀಫ್ ಮಾಡುತ್ತಿದ್ದಾರೆ ಅಷ್ಟೇ. ಮೂರು ದಿನ ನಾಲ್ಕು ದಿನ ಆದ್ರು ಟೆಸ್ಟ್ ರಿಸಲ್ಟ್ ಸಿಗುತ್ತಿಲ್ಲ. ಆಂಬ್ಯುಲೆನ್ಸ್ ಸರಿಯಾಗಿ ಸಿಗುತ್ತಿಲ್ಲ, ನರಕ ಸದೃಶವಾದ ಘಟನೆ ಕಾಣುತ್ತಿವೆ. ಸಿಎಂ ಒಂದು ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ, ಮಂತ್ರಿಗಳು ಮಾಡುತ್ತಿಲ್ಲ. ಎಲ್ಲಿ ಲಂಚ ಸಿಗುತ್ತೆ ಅಲ್ಲಿ ಕಿತ್ತಾಟ ಮಾಡುತ್ತಿದ್ದಾರೆ. ಸಚಿವರು ಕಮಿಷನ್ ಪಡೆಯಬೇಕು ಎಂದು ಪೈಪೋಟಿ ನಡೆಸುತ್ತಿದ್ದಾರೆ.
ಕೊರೊನಾ ಪರಿಸ್ಥಿತಿ ನೆನಸಿಕೊಂಡ್ರೆ ನಡುಕ ಹುಟ್ಟಿಸುತ್ತೆ- ಉಗ್ರಪ್ಪ
Please follow and like us: