ಕೊರೊನಾ ವಿರುದ್ದ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು

ಬೀದರ್ ಆರ್ಥಿಕ ಸಂಕಷ್ಟದಲ್ಲೂ ಕೊರೊನಾ ವಿರುದ್ದ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಮಾಸಿಕ ವೇತನ 12,000 ರೂ.  ನೀಡುವಂತೆ ಆಗ್ರಹಿಸಿ ಭಾಲ್ಕಿ ಹಾಗೂ ಔರಾದ್ ತಾಲ್ಲೂಕಿನಲ್ಲಿಂದು ಆಶಾ ಕಾರ್ಯೆಕರ್ತೆಯರು ತಹಶೀಲ್ದಾರ್  ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಆಶಾ ಕಾರ್ಯಕರ್ತೆಯರು ತಮ್ಮ ಜೀವನದ ಹಂಗು ತೊರೆದು ಕೋವಿಡ್ ವಿರುದ್ಧ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ನಮಗೆ ರಾಜ್ಯ ಸರಕಾರದಿಂದ ಮಾಸಿಕ 12,000 ರೂ. ವೇತನ ಜೊತೆಗೆ ಕೋವಿಡ್-19ರ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಸುರಕ್ಷತಾ ಸಾಮಾಗ್ರಿಗಳನ್ನು ನೀಡಬೇಕು ,ಅಲ್ಲದೆ ಕೋವಿಡ್-19ರ ಸೋಂಕಿಗೆ ತುತ್ತಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಮತ್ತು ಸಂಪೂರ್ಣ ಚಿಕಿತ್ಸೆ ಸರಕಾರದಿಂದಲೆ ನೀಡಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಎಪಿಎಂಸಿ ಅವಾಂತರ- ಕಣ್ಣುಮುಚ್ಚಿ ಕುಳಿತ ನಗರಸಭೆ

Sat Jul 25 , 2020
ಕೋಲಾರ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯವರು ಟೊಮ್ಯಾಟೋ ತಾಜ್ಯವನ್ನು ರಾತ್ರಿ ವೇಳೆ ಜನರ ಕಣ್ಣುತಪ್ಪಿಸಿ ಪ್ರಮುಖ ರಸ್ತೆಗಳ  ಅಕ್ಕ-ಪಕ್ಕದಲ್ಲಿ  ಸುರಿದು ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದಾರೆ. ನಗರದಲ್ಲಿ ಸಾಕ್ರಾಮಿಕ ರೋಗಗಳು ಮಿತಿ ಮಿರುತ್ತಿದ್ದು, ಅಧಿಕಾರಿಗಳು ತಮ್ಮ ಕುರ್ಚಿಗಳಿಗಷ್ಟೇ ಸೀಮಿತವಾಗಿದ್ದಾರೆ ಎಂದು  ಯುವ ಮುಖಂಡ ಚಂದ್ರಮೌಳಿ ಅವರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ 1000 ಸಂಖ್ಯೆ ಹಂಚಿಗೆ ಬಂದಿದ್ದು, ತಮಗೆ ತಿಳಿಯೇ ಇಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಅಂತ. ಇಲ್ಲಿ ನಗರಸಭೆಯಿಂದ ದಂಡ ವಿಡಿಸಲಾಗುವುದು ಅಂತ […]

Advertisement

Wordpress Social Share Plugin powered by Ultimatelysocial