ಕೊರೊನಾ ಸೋಂಕು ಎದುರಿಸಲು ಗಣ್ಯ ವೈದ್ಯರು, ತಜ್ಞರನ್ನು ಒಳಗೊಂಡ ಸಮಿತಿ ರಚನೆಗೆ ಹೈಕೋರ್ಟ್ ಆದೇಶಿಸಿದೆ. ಜೂನ್ ಅಂತ್ಯದಿಂದಲೂ ಕೊರೊನಾ ದ್ವಿಗುಣಗೊಂಡಿದೆ. ಹಾಗಾಗಿ ಕೊರೋನಾ ನಿರ್ವಹಣೆಗೆ ಸಮಿತಿ ಅತ್ಯಗತ್ಯವಾಗಿದೆ. ಈಗಾಗಲೇ ರಚಿಸಿರುವ ಸಮಿತಿ ಸಮರ್ಪಕವಾಗಿಲ್ಲ. ಈ ಸಮಿತಿಯು ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುತ್ತಿರಬೇಕು. ಜೊತೆಗೆ ಜಿಲ್ಲಾ ಮಟ್ಟದಲ್ಲೂ ಇಂತಹ ತಜ್ಞರ ಸಮಿತಿ ರಚಿಸಬೇಕು, ಇಲ್ಲವಾದಲ್ಲಿ ಗಂಭೀರ ವೈಫಲ್ಯವೆಂದು ಪರಿಗಣಿಸಲಾಗುವುದು ಎಂದು ಮುಖ್ಯ ನಾಯಮೂರ್ತಿ ಎ.ಎಸ್ ಓಖಾ ಹಾಗೂ ನ್ಯಾ. ಅರವಿಂದ್ ಕುಮಾರ್ ಅವರ ಪೀಠ ಆದೇಶಿಸಿದೆ.
ಕೊರೊನಾ ಸೋಂಕು ಎದುರಿಸಲು ಹೈಕೋರ್ಟ್ ಆದೇಶ
Please follow and like us: