ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ಜಾಗಟೆ ಭಾರಿಸಿ ಪ್ರತಿಭಟನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಆನ್‌ಲೈನ್ ಶಿಕ್ಷಣ ರದ್ದುಗೊಳಿಸುವಂತೆ ವಾಟಾಳ್ ನಾಗರಾಜ್  ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ಜಾಗಟೆ ಭಾರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಸ್ ಸುರೇಶ್ ಕುಮಾರ್ ಹಠಕ್ಕೆ ಬಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾಡಲು ಹೊರಟಿದ್ದಾರೆ. ಕೊರೊನಾ ಪ್ರಕರಣ ಕಡಿಮೆ ಇದ್ದ ವೇಳೆ ಲಾಕ್‌ಡೌನ್ ಮಾಡಿದ್ರು. ಕೊರೊನಾ ಅಟ್ಟಹಾಸ ಮೆರೆಯುವ ವೇಳೆ ಓಪನ್ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಂತರ ಮೌಲ್ಯಮಾಪನ ಮಾಡುವ ಶಿಕ್ಷಕರ ಭವಿಷ್ಯದ ಪ್ರಶ್ನೆ ಎದುರಾಗಿದೆ. ರಾಜ್ಯದಲ್ಲಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಪ್ರಾಥಮಿಕ ಹಂತದಿAದ ಡಿಗ್ರಿಯವರೆಗೂ ಆನ್‌ಲೈನ್ ಶಿಕ್ಷಣ ಮಾಡೋದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರು. ಸದ್ಯ ಕರ್ನಾಟಕವನ್ನು ಅಮೇರಿಕಾ ಮಾಡಲು ಆಗಲ್ಲ. ಕೊರೊನಾ ವೈರಸ್ ವೇಳೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿಲ್ಲ. ಹೀಗಾಗಿ ಪರೀಕ್ಷೆಗಳನ್ನು ನಡೆಸುವುದು ಸರಿಯಲ್ಲ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಮಾಂಸ ಮಾರಾಟ ಮಳಿಗೆಗೆ ದಿಢೀರ್ ಭೇಟಿ

Sat Jun 13 , 2020
ಹಾಸನ ಜಿಲ್ಲೆಯ ಅರಸೀಕೆರೆಯ ಮಟನ್ ಮಾರ್ಕಟ್‌ನಲ್ಲಿ ಅನಿಮಲ್ ವೆಲ್‌ಫೆರ್ ಆಫ್ ಇಂಡಿಯಾ ಕಾರ್ಯಕರ್ತೆ ನಂದಿನಿ ಮ್ಯಾಥ್ಯನ್ ಸಾರ್ವಜನಿಕರ ದೂರಿನ ಮೆರೆಗೆ ಮಾಂಸ ಮಾರಾಟ ಮಳಿಗೆಯಲ್ಲಿ ತಪಾಸಣೆ ಮಾಡುವಾಗ ಗೋ ಮಾಂಸ ದೊರೆತ್ತಿದ್ದು, ಇದರ ಸಂಭAದ ೩ ಹೆಮ್ಮೆ , ೩ಹಸು, ೬ ಕರು ಮತ್ತು ಒಂದು ಜೆರ್ಸಿ ಹಸುವನ್ನು ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ದೂರಿನ ಆದರದ ಮೇಲೆ ಸ್ಥಳೀಯ […]

Advertisement

Wordpress Social Share Plugin powered by Ultimatelysocial