ಸಿಸಿ ರಸ್ತೆ ಚರಂಡಿ ಇಲ್ಲದೆ ದಿನನಿತ್ಯ ಊರಿನಲ್ಲಿ ಜನರು ರಸ್ತೆಯ ಮೇಲೆ ತಿರುಗಾಡಲು ಹರಸಾಹಸ ಪಡುವಂತಾಗಿದೆ ಎಂದು ರೈತ ಸಂಘದ ಮುಖಂಡ ಬಸವರಾಜ ಬಿರಾದಾರ ಹೇಳಿದರು. ರಾಯಚೂರು ಜಿಲ್ಲೆಯ ಚಿಂಚೋಡಿ ಗ್ರಾಮದಲ್ಲಿ ಮತನಾಡಿದ ಅವರು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತದೆ. ಆದರೆ ಯೋಜನೆಗಳು ಅನುಷ್ಠಾನಗೊಳ್ಳುವ ಹಂತದಲ್ಲಿ ಮಾತ್ರ ಕೆಲ ಅಧಿಕಾರಿಗಳ ನಿರ್ಲಕ್ಷತನಕ್ಕೆ ಕಾಮಗಾರಿಗಳು ಹಳ್ಳ ಹಿಡಿಯುತ್ತವೆ. ಗ್ರಾಮದಲ್ಲಿ ಚರಂಡಿಗಳು ಇಲ್ಲದೆ ರಸ್ತೆಯಲ್ಲೆಲ್ಲಾ ಗಲೀಜು ನೀರು ಹರಿದಾಡುತ್ತಿದೆ. ರಸ್ತೆಯಲ್ಲಾ ನೀರು ಹರಿಯುತ್ತಿರುವ ಪರಿಣಾಮ ಜನರಿಗೆ ಓಡಾಡಲಿಕ್ಕೆ ತೊಂದರೆಯಾಗುತ್ತಿದೆ. ಒಂದೆಡೆ ಮಾರಕ ಕೊರೋನಾ ರೋಗದ ಭೀತಿಯಲ್ಲಿ ಜನರಿದ್ದಾರೆ. ಮತ್ತೊಂದೆಡೆ ಇದರ ಪರಿವೆಯೇ ಇಲ್ಲದಂತೆ ಪಂಚಾಯಿತಿ ಆಡಳಿತ ಇರುವುದು ಮಾತ್ರ ವಿಪರ್ಯಾಸ. ಗ್ರಾಮದಲ್ಲಿ ಸಮಸ್ಯೆ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದರು. ಯಾರೊಬ್ಬರು ಗ್ರಾಮದ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ.್ಲ ಮಕ್ಕಳು, ವೃದ್ಧರು, ಮಹಿಳೆಯರು ರಸ್ತೆಯ ಮೇಲೆ ತಿರುಗಾಡಲು ಹರಸಾಹಸ ಪಡಬೇಕಾಗುತ್ತದೆ. ಇನ್ನಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಪಂಚಾಯಿತಿ ಮುಂದೆ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಚರಂಡಿಗಳು ಇಲ್ಲದೆ ರಸ್ತೆಯಲ್ಲಾ ನೀರು
Please follow and like us: