ತಳ್ಳುಗಾಡಿಯಲ್ಲಿ ತರಕಾರಿ, ಮೊಟ್ಟೆ ಮಾರುತ್ತಿದ್ದ ೧೪ ವರ್ಷದ ಬಾಲಕ

ತಳ್ಳುಗಾಡಿಯಲ್ಲಿ ತರಕಾರಿ, ಮೊಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ 14 ವರ್ಷದ ಬಾಲಕ 100 ರೂ. ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಇಂದೋರ್​ನ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಗಾಡಿಯನ್ನು ಮಗುಚಿಹಾಕಿದ್ದಾರೆ. ಕೋವಿಡ್​-19 ಪಿಡುಗು ಮೊದಲೇ ಬಡವರ ಬದುಕನ್ನು ಅಸ್ತವ್ಯಗೊಳಿಸಿದೆ. ಈ ಸಮಯದಲ್ಲಿ ಅಳಿದುಳಿದಿರುವ ಬಂಡವಾಳದಲ್ಲೇ ತಳ್ಳುಗಾಡಿಯಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡಿ ಕುಟುಂಬವನ್ನು ನಿರ್ವಹಿಸಲು ಯತ್ನಿಸುತ್ತಿರುವ ಯುವಕನಿಗೆ ಮೊದಲಿನಷ್ಟು ನಿರೀಕ್ಷಿತ ಆದಾಯ ಬರುತ್ತಿರಲಿಲ್ಲವಂತೆ. ಹಾಗಾಗಿ ಸಾಲ ಮಾಡಿ ತಂದು ಹಾಕಿದ ಬಂಡವಾಳದಲ್ಲಿ ದುಡಿದು ಸಾಲ ತೀರಿಸಲೂ ಆಗದೆ ಪರದಾಡುತ್ತಿದ್ದ ಯುವಕ. ಗಾಡಿಯನ್ನು ಮಗುಚಿ ಹಾಕಿದ ಅಧಿಕಾರಿಗಳನ್ನು ನಿಂದಿಸುತ್ತಾ, ತನ್ನ ದುರದೃಷ್ಟಕ್ಕೆ ತನ್ನನ್ನೇ ತಾನು ಹಳಿದುಕೊಳ್ಳುತ್ತಾ ಅಳಿದುಳಿದ ವಸ್ತುಗಳನ್ನು ಎತ್ತಿಕೊಂಡು ಅಸಹಾಯಕನಾಗಿ ಮುಂದೆ ಸಾಗಿದ. ಇದರಿಂದಾಗಿ ಗಾಡಿಯಲ್ಲಿದ್ದ ಸಾವಿರಾರು ರೂ. ಮೌಲ್ಯದ ಮೊಟ್ಟೆ, ತರಕಾರಿ ರಸ್ತೆ ಪಾಲಾಗಿವೆ.

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಬಳಿ ಇರುವ ಜಲಪಾತ

Fri Jul 24 , 2020
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಬಳಿ ಇರುವ ಗುಂಡಲಬಂಡ ಜಲಪಾತಕ್ಕೆ ಈಜಲು ಹೋಗಿದ್ದ ನಾಲ್ಕು ಮಂದಿ ನೀರಿನ ಮಧ್ಯೆಯೆ ಸಿಲುಕಿಕೊಂಡಿದ್ದಾರೆ. ಗುಂಡಲಬಂಡ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ದೇವದುರ್ಗ ತಾಲ್ಲೂಕಿನ ಮೂಡಲಗುಂಡ ಗ್ರಾಮದವರು ಎಂದು ತಿಳಿದು ಬಂದಿದೆ. ಈಜಲು ಹೋದ ನಾಲ್ಕು ಜನರಲ್ಲಿ  ತಂದೆ ಮಗ ಇಬ್ಬರು ನೀರಲ್ಲಿ ಸಿಗದಂತೆ ಕೊಚ್ಚಿಕೊಂಡು ಹೋಗಿದ್ದಾರೆ. ಒಬ್ಬ ನೀರಿನ ಮಧ್ಯೆ ಸಿಲುಕಿಕೊಂಡಿದ್ದು, ಮತ್ತೋರ್ವ ನೀರಿನಲ್ಲಿ ಈಜಿಕೊಂಡು ದಡ ಸೇರಿಕೊಂಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ […]

Advertisement

Wordpress Social Share Plugin powered by Ultimatelysocial