ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕರೋನಾ ನಿಯಂತ್ರಣಕ್ಕೆ ಸಂಬAಧಿಸಿದAತೆ ದಾಸರಹಳ್ಳಿ ವಲಯ ಉಸ್ತುವಾರಿ ಸಚಿವರಾದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಗೋಪಾಲಯ್ಯನವರು ಹಾಗೂ ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ೮ ವಾರ್ಡುಗಳು ಹಾಗೂ ೨ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಮುಖ್ಯರಸ್ತೆಗಳು, ಅಡ್ಡರಸ್ತೆಗಳು ಹಾಗೂ ಪ್ರತಿ ಕಂಟೋನ್ಮೆAಟ್ ಜೋನ್ ಗಳಿಗೂ ಸಮರ್ಪಕವಾಗಿ ಔಷಧಿ ಸಿಂಪಡಿಸಲು ಟ್ರ್ಯಾಕ್ಟರ್ ಗಳು ಹಾಗೂ ಜೆಟ್ ಮೆಷಿನ್ ಲಾರಿ ಹಾಗೂ ಕೈಪಂಪ್ ಸ್ಪ್ರೇ ಮೇನ್ ಗಳಿಗೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಬಿಬಿಎಂಪಿ ವಾಡ್ ಸದಸ್ಯರುಗಳು, ವಲಯ ಜಂಟಿ ಆಯುಕ್ತರು ಹಾಗೂ, ಉನ್ನತ ಅಧಿಕಾರಿಗಳು ಹಾಜರಿದ್ದರೂ ಹಾಗೂ ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಸಚಿವರು ಎಲ್ಲರೂ ಒಟ್ಟಿಗೆ ಕಾರ್ಯನಿರ್ವಹಿಸುವ ಮೂಲಕ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕರೋನ ಮುಕ್ತ ವಲಯವನ್ನಾಗಿ ಪರಿವರ್ತಿಸುವುದಾಗಿ ತಿಳಿಸಿದರು.
ದಾಸರಹಳ್ಳಿಯಲ್ಲಿ ರಸ್ತೆಗಳಿಗೆ ಔಷಧಿ ಸಿಂಪಡಿಕೆ
Please follow and like us: