ದೇಶದ ಬಾಧಿತರ ಸಂಖ್ಯೆ ೬ ಲಕ್ಷಕ್ಕೆ

ದೇಶದಲ್ಲಿ ಕೋವಿಡ್-೧೯ ಬಾಧಿತರ ಸಂಖ್ಯೆ ೬ ಲಕ್ಷ ದಾಟಿದೆ. ಜೂ. ೨೬ರಂದು ೫ ಲಕ್ಷ ದಾಟಿದ್ದ ಸಂಖ್ಯೆ ಜು. ೧ರ ವೇಳೆಗೆ ೬ ಲಕ್ಷಕ್ಕೇರಿದೆ. ಸಾವಿನ ಸಂಖ್ಯೆ ೧೭,೭೮೬ಕ್ಕೆ ತಲುಪಿದ್ದು, ಚೇತರಿಸಿಕೊಂಡವರ ಸಂಖ್ಯೆಯೂ ೩,೫೮,೪೫೩ಕ್ಕೆ ಮುಟ್ಟಿದೆ. ಜೂ. ೨೬ರಂದು ೧೮,೨೫೫, ಜೂ. ೨೭ರಂದು ೨೦,೧೪೨, ಜೂ. ೨೮ರಂದು ೧೯,೬೧೦, ಜೂ. ೨೯ರಂದು ೧೮,೩೩೯, ಜೂ. ೩೦ರಂದು ೧೮,೨೫೬ ಹಾಗೂ ಜು. ೧ರಂದು ೧೬,೧೬೦ ಏರಿಕೆಯಾಗಿದೆ. ಈ ಮೂಲಕ ಆರು ದಿನಗಳಲ್ಲೇ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ಬುಧವಾರ ಮಹಾರಾಷ್ಟ್ರದಲ್ಲೇ ೫,೫೩೭ ಪ್ರಕರಣ ದೃಢಪಟ್ಟಿವೆ. ತಮಿಳು ನಾಡಿನಲ್ಲೂ ೩,೮೮೨ ಪ್ರಕರಣ ದಾಖ ಲಾಗಿದ್ದು, ಇಲ್ಲಿನ ಸಂಖ್ಯೆ ೯೪,೦೪೯ಕ್ಕೆ ತಲುಪಿದೆ. ದಿಲ್ಲಿಯೂ ೯೦ ಸಾವಿರದ ಸನಿಹದಲ್ಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಐಸಿಸಿ ಹುದ್ದೆ ಪೂರೈಸಿದ ಶಶಾಂಕ್ ಮನೋಹರ್

Thu Jul 2 , 2020
ಭಾರತದ ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರು ಎರಡು ವರ್ಷಗಳ ಎರಡು ಅವಧಿಗಳಲ್ಲಿ ಕ್ರಿಕೆಟ್ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಿದ್ದರು. ಆದರೆ ಇದರ ಕಾರ್ಯಾವಧಿ ಮುಗಿಯಿತು. ನೂತನ ಅಧ್ಯಕ್ಷರು ಚುನಾಯಿತರಾಗುವ ತನಕ ಉಪಾಧ್ಯಕ್ಷ ಇಮ್ರಾನ್ ಖ್ವಾಜಾ ಅವರೇ ಉಸ್ತುವಾರಿ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಲಿದ್ದಾರೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಐಸಿಸಿ ನಿಯಮದಂತೆ ಎರಡು ವರ್ಷಗಳ ೩ ಅವಧಿಗಳ ತನಕ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಬಹುದು. ಆದರೆ ಈಗಾಗಲೇ […]

Advertisement

Wordpress Social Share Plugin powered by Ultimatelysocial