ಪುಷ್ಪ ಸಿನಿಮಾದ ಯಶಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ಹೆಚ್ಚಾಗಿದೆ. ಪುಷ್ಪ ಸಿನಿಮಾದಲ್ಲಿನ ರಶ್ಮಿಕಾ ಅಭಿನಯಕ್ಕೆ ಪ್ರೇಕ್ಷಕರು, ಸಿನಿಮಾಮಂದಿ ಮನ ಸೋತಿದ್ದಾರೆ. ಸೌತ್ ಜೊತೆಗೆ ಬಾಲಿವುಡ್ ಮಂದಿಯ ಗಮನವನ್ನು ಸೆಳೆದಿದ್ದಾರೆ. ಪುಷ್ಪ ಹಿಂದಿಯಲ್ಲೂ ರಿಲೀಸ್ ಆದ ಕಾರಣ, ರಶ್ಮಿಕಾಗೆ ಅಲ್ಲಿ ಅದಾಗಲೇ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಖ್ಯಾತಿ ಪಡೆಯುತ್ತಿದ್ದ ಹಾಗೆ ಟ್ರೋಲ್ ಗೂ ಅಷ್ಟೇ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ರಶ್ಮಿಕಾ ಮಂದಣ್ಣ.
ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಾನು ತೊಟ್ಟ ಉಡುಪಿನಿಂದ ಟ್ರೋಲ್ ಆಗಿದ್ರು. ಮುಂಬೈನಲ್ಲಿ ಇಳಿಯುತ್ತಿದ್ದ ಹಾಗೆ ರಶ್ಮಿಕಾ ನಿನ್ನ ಪ್ಯಾಂಟ್ ಎಲ್ಲಿ ಎಂದು ಕೆಲವರು ಕಾಲೆಳೆದಿದ್ದರು. ಈಗ ಮತ್ತೊಮ್ಮೆ ಮುಂಬೈ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ.
ರಶ್ಮಿಕಾಳನ್ನು ನೋಡಲು ಬಂದ, ಮಕ್ಕಳೊಂದಿಗೆ ಆಕೆ ನಡೆದುಕೊಂಡ ರೀತಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಇದು ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾಳನ್ನು ಪ್ರಶ್ನೆ ಮಾಡಲಾಗುತ್ತಿದೆ.ಕರಣ್ ಜೋಹರ್ ಮನೆ ಮುಂದೆ ನಡೆದಿದ್ದು ಏನು?
ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮುಂಬೈಗೆ ತೆರಳಿದ್ದಾರೆ. ಅಲ್ಲಿ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿ ಮಾಡಿದ್ದಾರೆ. ಕರಣ್ ಭೇಟಿ ಮಾಡಿ ವಾಪಸ್ ಬರುವ ವೇಳೆ ಒಂದಷ್ಟು ಮಕ್ಕಳು ರಶ್ಮಿಕಾಳನ್ನು ನೋಡಲು ಕಾಯುತ್ತಾ ನಿಂತಿರುವುದು ಕಂಡುಬಂತು. ಆದರೆ ರಶ್ಮಿಕಾ ಅವರನ್ನು ಪಕ್ಕಕ್ಕೆ ತಳ್ಳಿ ಕಾರು ಹತ್ತುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada