ಪ್ರಪಂಚದಲ್ಲಿ ಒಂದಲ್ಲ ಒಂದು ಬದಲಾವಣೆ ಆಗುತ್ತಲೇ ಬರತ್ತವೇ ಆದರೆ ನಾವು ಬದಲಾಣೆ ಹೊಂದಾಣಿಕೆ ಯಾಗಿ ಹೋಗುತ್ತೀವಿ ಅದೇ ರೀತಿ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು ತಕ್ಕಂತೆ ನಾವು ಬದಲಾವಣೆ ಯಾಗಬೇಕು…?
ರಾಮಯಣ ಬರೆದವರು ಯಾರು ಅಂತಾ ಕೇಳಿದ್ರೇ ಒಬ್ಬ ಸಣ್ಣ ಮಗು ಕೂಡಾ ಹೇಳತ್ತು ವಾಲ್ಮೀಕಿ ಅಂತಾ ಆದರೆ ವಾಲ್ಮೀಕಿ ಅಂದ್ರೇ ಮೊದಲ ಅವಾಗಿನ ಕಳ್ಳನಾದ ರತ್ನಾಕರ, ಅವನ್ನು ಅವತ್ತು ರಾಮ ರಾಮ ಅಂತಾ ಜಪ್ಪ್ ಮಾಡಿ ಬದಲಾವಣೆಯಾಗಲಿಲ್ಲ ಅಂದ್ರೇ ರಾಮಾಯಣ ಇವತ್ತು ನಮ್ಮ ಕೈಯಲ್ಲಿ ಇರುತ್ತಿರಲಿಲ್ಲ….!
ನಮ್ಮದೇ ರಾಜ್ಯದಲ್ಲಿ ತಯಾರಗುತ್ತಿರುವ ಎಚ್ ಎಂಟಿ ವಾಚ್ ನಮ್ಮ ರಾಜ್ಯ ದ ಸಂಕೇತವಾಗಿತ್ತು ಆದರೆ ಇದೀಗ
ಎಚ್ ಎಂಟಿ ವಾಚ್ ಖರೀದಿಸುವವರು ಇಲ್ಲ, ಇನ್ನೂ ವಾಚ್ ತಯಾರಿಸುವವರು ಇಲ್ಲ. ಮೊದಲು ನಮ್ಮಗೆ ನೊಕೀಯಾ ಮೊಬೈಲ್ ಕೈ ಸಿಕ್ರೇ ಸಾಕು, ಇಡೀ ಊರಿನ ತುಂಬಾ ಜನರಿಗೆ ತೊರಿಸುತ್ತಾ ಅವಾಗ ಬರುವ ನೊಕೀಯಾ ಕಂಪನಿ ರಿಂಗ್ ಟೌನ್ ಹಾಕೋಡು ಓಡಾಡುತ್ತಿದೆವು ಅದರೇ ಇದೀಗ ಲಕ್ಷಾಂತರ ರೂಪಾಯಿ ಮೊಬೈಲ್ ಇದ್ರು ಯಾರು ನಮ್ಮನ ನೋಡಲ್ಲ…!
ಮೂವತ್ತು ನಲ್ಲವತ್ತು ವರ್ಷ ದ ಹಿಂದೆ ಎಲ್ಲರ ಕೈಯಲ್ಲಿ ಸಂಯುಕ್ತ ಕರ್ನಾಟಕ ಓದುಗರೇ ಜಾಸ್ತಿ ಇದ್ರೂ,ಅದರಲ್ಲಿ ಪ್ರಮುಖವಾಗಿ ಸಂಯುಕ್ತ ಕರ್ನಾಟಕ ಕೊಡು ಹೇಳುತ್ತಿದರು,ಬದಲಾಗಿ ಪತ್ರಿಕೆ ಕೊಡು ಅಂತ ಹೇಳುತ್ತಿರಲಿಲ್ಲ, ಆ ಕಾಲದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಮಿರಿಸೋ ಪತ್ರಿಕೆಯಾವದು ಬರುತ್ತೆ ಎಂದು ಯಾರು ಊಹಿಸರಲಿಲ್ಲ,ಆದರೆ ವಿಜಯ ಸಂಕೇಶ್ವರ ಪೋಟೊ ಹಾಕದ ಕಾರಣ ಸಂಯುಕ್ತ ಕರ್ನಾಟಕ ಪತ್ರಿಕೆ ಬಿಟ್ಟು ವಿಜಯ ಕರ್ನಾಟಕ ಪತ್ರಿಕೆ ತರುತ್ತಾರೆ,ನಂತರ ಅದನ್ನ ಮಾರಾಟ ಮಾಡಿ, ವಿಜಯವಾಣಿ ತಂದು ಕನ್ನಡದ ನಂ೧ಪತ್ರಿಕೆ ಮಾಡುತ್ತಾರೆ,ಆದರೆ ಅವರು ಅಂದು ಬಿಟ್ಟಿ ಸಂಯುಕ್ತ ಕರ್ನಾಟಕ ಪತ್ರಿಕೆ ಮಾತ್ರ ಇನ್ನೂ ಸುಧಾರಿಸಿಲ್ಲ.
ಈ ಹಿಂದೆ ಹೀರೋ ಹೊಂಡಾ ಕಂಪನಿ ಅದ್ರೇ ಸಾಕು ಎಲ್ಲರಿಗೂ ನೆನಪಿಗೆ ಬರೋದೇ ಸ್ಪೇಡರ್ ಪ್ಲಸ್ ಬೈಕ್, ಆದರೆ ಈಗ ಹೀರೋ ಒಂದು ಕಂಪನಿಯಾಗಿದೆ, ಹೊಂಡಾ ಒಂದು ಕಂಪನಿಯಾಗಿದೆ.
ಅದೇಲ್ಲ ಬಿಡಿ ಮೊದ್ಲು ರಾಜ್ಯ ರಾಜಧಾನಿ ಮೈಸೂರಾಗಿತ್ತು, ಆದರೆ ೧೭೯೯ರಲ್ಲಿ ಟೀಪು ಸುಲ್ತಾನನ ಸೋಲಿನ ನಂತರ, ಬ್ರಿಟಿಷರು ಒಡೆಯರ್ ಮನೆತನವನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ಮೈಸೂರು ಬ್ರಿಟಿಷ್ ಸಾಮ್ರಾಜ್ಯದ ಕೆಳಗೆ ಉಳಿಯಿತು ಮತ್ತು ೧೮೩೪ ರಲ್ಲಿ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು.ಮುಂದೆ
೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ ೧೯೫೦ ರಲ್ಲಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ ೧೯೫೬ರ ಏಕೀಕರಣ ನಂತರ “ವಿಶಾಲ ಮೈಸೂರು ರಾಜ್ಯ” ಎಂಬ ಹೆಸರು ಪಡೆಯಿತು.ನಂತರ೧೯೭೩ರಲ್ಲಿ “ಕರ್ನಾಟಕ ರಾಜ್ಯ ” ಎಂಬ ಹೆಸರು ಸ್ಥಿರವಾಯಿತು
ಇಷ್ಟೇಲ್ಲಾ ಪ್ರಪಂಚದಲ್ಲಿ ಬದವಾಲಣೆಗೆ ನಾವು ಬದಲಾವಣೆಯಾಗಿದ್ದೇವೆ ಅದ್ರೇ ನಮ್ಮ ಜೀವನದಲ್ಲಿ ಆಗೋವು ಕಹಿ ಘಟನೆಗಳನ್ನು ಮರೆತು ನಾವು ಬದಲಾವಣೆಯಾಗಬೇಕು ಅಷ್ಟೇ, ಈ ಲೇಖನದ ಉದ್ದೇಶ ಇಷ್ಟೇ ಜೀವನದಲ್ಲಿ ಹೇಗೆ ಬದಲಾವಣೆ ಯಾಗತ್ತೆ ಹಾಗೇ ನಾವು ಕೂಗ್ಗದೆ ನಾವು ಅದಕ್ಕೆ ತಕ್ಕಂತೆ ನಾವು ಬದಲಾವಣೆ ಆಗಬೇಕು…!!
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada