ನಾಳೆ “ಕೋಟಿಗೊಬ್ಬ-3 ಟ್ರೇಲರ್‌ ಔಟ್..! “ಬಾಕ್ಸ್‌ ಆಫೀಸ್‌ ಲೂಟಿ” ಮಾಡಲು ಕೋಟಿಗೊಬ್ಬ-3 ರೆಡಿ

ಲಾಕ್‌ ಡೌನ್‌ ಸಡಲಿಕೆಯಿಂದ ಬಿಡುಗಡೆಗೆ ಸಜ್ಜಾಗಿ ನಿಂತಿದ್ದ ಸಿನಿಮಾಗಳು ಸರ್ಕಾರದಿಂದ ಶೇ.100ರಷ್ಟು ಆಸನಕ್ಕೆ ಅನುಮತಿ  ನೀಡಿದ ಬೆನ್ನಲ್ಲೇ ಸಿನಿಪ್ರಿಯರು  ಭಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ದಿಂದ 100ರಷ್ಟು ಆಸನಕ್ಕೆ ಅವಕಾಶ ಕೊಟ್ಟ ಬೆನ್ನಲ್ಲೇ ಅನೇಕ ಚಿತ್ರತಂಡಗಳು ಬಿಡುಗಡೆಗೆ ಈಗಾಗಲೇ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ದಿನಾಂಕ ಕೂಡ ಈಗ ನಿರ್ಧಾರವಾಗಿದೆ.ಹಾಗಾದರೆ ಆ ಬಹು ನೀರಿಕ್ಷಿತ ಸಿನಿಮಾ ಯಾವುದೂ ಅನ್ನೋ ಕುತೂಹಲ ನಿಮಗಿದೆ ಅಲ್ಚಾ ಹಾಗಾದ್ರೆ ಈ ಸ್ಟೋರಿ ನೋಡಿ….

ಇತ್ತೀಚಿಗಷ್ಟೇ ಶಿವರಾಜ್ ಕುಮಾರ್, ದುನಿಯಾ ವಿಜಿ ಹಾಗೂ ಧನಂಜಯ್ ಅಭಿನಯದ ಭಜರಂಗಿ-2” “ಸಲಗ” “ಬಡವ ರಾಸ್ಕಲ್ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದ್ದಾರೆ.ಇನ್ನು ಇದರ ಬೆನ್ನಲೇ ಬಹು ನಿರೀಕ್ಷಿತ ಚಿತ್ರವೊಂದು ತನ್ನ ಬಿಡುಗಡೆ ದಿನಾಂಕ ನಿಗದಿ ಪಡಿಸಲು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3” ಚಿತ್ರ ಯಾವಾಗ ಬಿಡುಗಡೆ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿರುವಾಗಲೇ ಚಿತ್ರತಂಡದಿಂದ ಹೊಸ ಸುದ್ದಿ ಒಂದು ಭಾರೀ ಸದ್ದು ಮಾಡುತ್ತಿದೆ.  

ಹೌದು ಇತ್ತೀಚಗಷ್ಟೇ ಕಿಚ್ಚ ಸುದೀಪ್ ಡಬ್ಬಿಂಗ್ ಮುಗಿಸುವ ಮೂಲಕ ಕೋಟಿಗೊಬ್ಬ-3” ಚಿತ್ರದ ಕೆಲಸ ಸಂಪೂರ್ಣವಾಗಿ ಮುಕ್ತಾಯವಾಗಿದೆ ಎಂದು ಸ್ವತಃ ಕಿಚ್ಚ ಸುದೀಪ್ ಹೇಳಿದ್ದಾರೆ. ಇದರ ಜೊತೆಗೆ ಆದಷ್ಟು ಬೇಗ ಕೋಟಿಗೊಬ್ಬ-3” ಚಿತ್ರ ಬಿಡುಗಡೆ ದಿನಾಂಕ ಅನೌನ್ಸ್ ಮಾಡುವುದಾಗಿ ಸುದೀಪ್ ತಿಳಿಸಿದರು.ಆಗಾಗಿ  “ಕೋಟಿಗೊಬ್ಬ-3” ಚಿತ್ರ ಸುದೀಪ್ ಜನ್ಮದಿನದಂದು ರಿಲೀಸ್ ಆಗಲಿದೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು .ಆದರೆ ಆದ್ಯಾವುದೂ ಕೂಡ  ಸಾಧ್ಯಾವಾಗಿಲ್ಲ . ಕಿಚ್ಚ ನಟನೆಯ ಮತ್ತೊಂದು ಚಿತ್ರ ವಿಕ್ರಾಂತ ರೋಣ ಕೂಡ ಚಿತ್ರೀಕರಣ ಮುಸಿಗಿ ತನ್ನ ಪ್ರೀಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.ಆಗಾಗಿ ವಿಕ್ರಾಂತ ರೋಣಕ್ಕಿಂತ ಮುಂಚೆನೇ ಕೋಟಿಗೊಬ್ಬ-3” ಚಿತ್ರ ಥಿಯೇಟರ್ ಗೆ ಎಂಟ್ರಿ ಕೊಡಲು ತಯಾರಾಗಿದೆ. ಇನ್ನು ಇದರ ಜೊತೆಗೆ ಚಿತ್ರತಂಡ ಕಿಚ್ಚ ಅಭಿಮಾನಿಗಳಿಗೆ ಡಬಲ್‌ ಧಮಾಕ ನೀಡಲಿದೆ ಇದೇ ಅಕ್ಟೋಬರ್‌ 7 ರಂದು ಕೋಟಿಗೊಬ್ಬ 3  ಚಿತ್ರತಂಡದಿಂದ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಲಿದೆ ಇದರ ಜೊತೆಗೆನೇ ಇದೇ ಅಕ್ಟೋಬರ್‌ 14ರಂದು ಸುದೀಪ್‌ ಅಭಿನಯದ ಕೋಟಿಗೊಬ್ಬ  3 ಬಿಡಿಗಡೆಯಾಗಿ ಅಭಿಮಾನಿಗಳನ್ನು ತೆರೆ ಮೇಲೆ ರಂಜಿಸಲಿದೆ  ಎಂದು ಚಿತ್ರತಂಡ ಹೇಳಿದೆ…ಇದರಿಂದ ಸುದೀಪ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಗಲಿದೆ.ಶಿವ ಕಾರ್ತಿಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೋಟಿಗೊಬ್ಬ-3” ಚಿತ್ರದಲ್ಲಿ ಮೊದಲು ಮತ್ತು ಎರಡನೇ ಭಾಗದಂತೆ ಕಿಚ್ಚ ಸುದೀಪ್ ಡಬಲ್ ರೋಲ್ ನಲ್ಲಿ ಮಿಂಚಿಲಿದ್ದಾರೆ.ಇನ್ನು ಕಿಚ್ಚನಗೆ ನಾಯಕಿಯಾಗಿ ಮಲಯಾಳಂ ಬೆಡಗಿ ಮಡೊನ್ನಾ ಸೆಬಾಸ್ಟಿಯನ್  ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಂಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

 “ಕೈ ನಾಯಕಿ” ಬಂಧನ ಖಂಡಿಸಿ ಕಾಂಗ್ರೆಸ್‌ ನಾಯಕರ ಮೆರವಣಿಗೆ...!ಬಿಜೆಪಿ ಕೊಲೆಗಡುಕ ಮನಸ್ಸಿಗೆ ಸಾಕ್ಷಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ..!

Wed Oct 6 , 2021
ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಮತ್ತು ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಕಾಂಗ್ರೆಸ್‌ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ಬೆಂಗಳೂರಿನ  ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಪಂಜಿನ ಮೆರವಣಿಗೆ ನಡೆಸಲು ಮುಂದಾದ ಕಾಂಗ್ರೆಸ್‌ ನಾಯಕರನ್ನು  ಇಂಡಿಯಾನ್‌ ಎಕ್ಸ್ ಪ್ರೆಸ್‌ ವೃತ್ತದ ಬಳಿ ಪೊಲೀಸರು ತಡೆದು ಮೆರವಣಿಗೆಯಲ್ಲಿದ್ದ ಕೈ ನಾಯಕರನ್ನು ವಶಪಡಿಸಿಕೊಂಡಿದ್ದಾರೆ.  ಉತ್ತರಪ್ರದೇಶದಲ್ಲಿ ರೈತರ  ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದವರು ಪ್ರತಿಭಟನೆ ಜಾಥಗಳನ್ನು ನಡೆಸುತ್ತಿದ್ದಾರೆ..ಪ್ರತಿಭಟನೆಯಲ್ಲಿ  […]

Advertisement

Wordpress Social Share Plugin powered by Ultimatelysocial