ಪ್ರೀತಿಸಿ ಮದುವೆಯಾದ ಪತ್ನಿ ಶವದೊಂದಿಗೆ ಕಾಡಿನಲ್ಲೇ ರಾತ್ರಿ ಕಳೆದ ಪತಿ,

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಜಡಗನಹಳ್ಳಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಮೃತದೇಹದೊಂದಿಗೆ ಪತಿ ರಾತ್ರಿ ಕಳೆದ ಘಟನೆ ವರದಿಯಾಗಿದೆ.ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಜಡಗನಹಳ್ಳಿಯವರಾದ 19 ವರ್ಷದ ಯುವತಿ ಮತ್ತು 20 ವರ್ಷದ ಅಭಿಷೇಕ್ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಯುವತಿ ಚಿಕ್ಕಮಗಳೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದು, ಒಂದೇ ಗ್ರಾಮದವರಾದ ಇಬ್ಬರು ಒಟ್ಟಿಗೆ ವಾಸವಾಗಿದ್ದರು. ಮದುವೆಗೆ ಮನೆಯವರು ವಿರೋಧ ಮಾಡಿರಲಿಲ್ಲ. ಆಪ್ರಾಪ್ತರಾಗಿದ್ದ ಕಾರಣ ಇವರ ಮದುವೆಗೆ ಮಾನ್ಯತೆ ಇರಲಿಲ್ಲಶುಕ್ರವಾರ ಸಂಬಂಧಿಕರ ಮದುವೆಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದ ಅಭಿಷೇಕ್ ವಾಪಸ್ ಮನೆಗೆ ಹೋಗದೆ ಜಡಗನಹಳ್ಳಿ ಸಮೀಪದ ಕಾಡಿನಲ್ಲಿ ಪತ್ನಿಯೊಂದಿಗೆ ರಾತ್ರಿ ಉಳಿದುಕೊಂಡಿದ್ದಾನೆ. ಬೆಳಗ್ಗೆ ಕಾಡಿಗೆ ತೆರಳಿದ್ದ ಗ್ರಾಮಸ್ಥರಿಗೆ ಇಬ್ಬರು ಅಲ್ಲಿ ಇರುವುದು ಕಂಡುಬಂದಿದೆ. ವಿಚಾರಿಸಿದಾಗ ಯುವತಿ ಮೃತಪಟ್ಟಿರುವುದು ಗೊತ್ತಾಗಿದೆ. ಅಭಿಷೇಕ್ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಸಾವಿನ ಕಾರಣ ನಿಗೂಢವಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಡಲೆ ಹೆಟ್ಟು ಕೂದಲಿಗೂ ಹಚ್ಚಬಹುದು.

Sun Jan 30 , 2022
ಕಡಲೆ ಹಿಟ್ಟನ್ನು ಅಡುಗೆ ಮನೆಯ ಹೊರತಾಗಿ ಸೌಂದರ್ಯ ವರ್ಧನೆಗೆ ಅಂದರೆ ಮುಖದ ಹೊಳಪು ಹೆಚ್ಚಿಸಲು, ಕಲೆ ತೊಡೆದು ಹಾಕಲು ಫೇಸ್ ಪ್ಯಾಕ್, ಫೇಸ್ ವಾಶ್ ರೂಪದಲ್ಲಿ ಬಳಸಿರುವುದನ್ನು ನೀವೆಲ್ಲಾ ಕೇಳಿರುತ್ತೀರಿ. ಆದರೆ ಈಗ ಕಡಲೆ ಹಿಟ್ಟಿನಿಂದ ಕೂದಲ ಬೆಳವಣಿಗೆ ಸಾಧ್ಯ ಎಂಬುದರ ಬಗ್ಗೆ ತಿಳಿಯೋಣ.ನಿಮ್ಮ ಕೂದಲು ವಿಪರೀತ ಒಣಗಿದ್ದರೆ ಮತ್ತು ಉದುರುತ್ತಿದ್ದರೆ ಕಡಲೆ ಹಿಟ್ಟು ನಿಮ್ಮ ಸಮಸ್ಯೆಗೆ ಪರಿಹಾರವಾಗಬಹುದು. ಕಡಲೆ ಹಿಟ್ಟಿಗೆ ಒಂದು ಚಮಚ ತೆಂಗಿನೆಣ್ಣೆ, ಬಾದಾಮಿ ಪುಡಿ, ಆಲಿವ್ […]

Advertisement

Wordpress Social Share Plugin powered by Ultimatelysocial