ಸಚಿವ ಎಸ್.ಟಿ.ಸೋಮಶೇರ್ಖ ಅವರ ಪುತ್ರ ನಿಶಾಂತ್ ಗೆ ಬ್ಲ್ಯಾಕ್ ಮೇಲ್ ಮಾಡಿದ ಸಂಬಂಧ ಶಾಸಕರ ಪುತ್ರಿಯ ಪಾತ್ರವಿದೆ ಎನ್ನಲಾಗುತ್ತಿತ್ತು. ಆದ್ರೇ.. ನನ್ನ ಮಗಳ ಯಾವುದೇ ಪಾತ್ರವಿಲ್ಲ. ಆಕೆ ವಿದೇಶದಲ್ಲಿ ಓದುತ್ತಾ ಇದ್ದಾಳೆ. ಸಿಸಿಬಿಗೆ ಎಲ್ಲಾ ಮಾಹಿತಿ ತಿಳಿಸಿರೋದಾಗಿ ಇಂಡಿ ಶಾಸಕರ ಯಶವಂತರಾಯಗೌಡ ಪಾಟೀಲ್ ಸ್ಪಷ್ಟ ಹೇಳಿಕೆ ನೀಡಿದ್ದಾರೆ
ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಅವರು, ನನ್ನ ಮಗಳು ವಿದೇಶದಲ್ಲಿ ಓದುತ್ತಿದ್ದಾಳೆ. ಆಕೆ ಬಳಸುತ್ತಿದ್ದಂತ ಸಿಮ್ ಅನ್ನು ಅವಳ ಸ್ನೇಹಿತನ ಕ್ಲೈಂಟ್ ಗೆ ಬೇಕು ಎಂದು ತಿಳಿಸಿದ ಕಾರಣ, ಸ್ನೇಹಿತನಿಗೆ ನೀಡಿದ್ದಾಳೆ. ಆಕೆಯ ಸ್ನೇಹಿತ ರಾಹುಲ್ ಭಟ್ ಗೆ ನೀಡಿದ್ದಾಳೆ ಆ ಸಿಮ್ ಕಾರ್ಡ್ ನಿಂದಲೇ ಬ್ಲ್ಯಾಕ್ ಮೇಲ್ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ
ಡಿಸೆಂಬರ್ 28ರಂದು ಸಿಸಿಬಿ ಅಧಿಕಾರಿಗಳಿಂದ ನೋಟಿಸ್ ಬಂದ ನಂತ್ರವೇ ಈ ಎಲ್ಲಾ ವಿಚಾರ ನನಗೆ ತಿಳಿದು, ಆಕೆಯನ್ನು ವಿಚಾರಿಸಿದಾಗ ನನಗೂ ತಿಳಿಯಿತು. ರಾಕೇಷ್ ಅಪ್ಪಣ್ಣ ಮತ್ತು ರಾಹುಲ್ ಭಟ್ ಇಬ್ಬರು ಸ್ನೇಹಿತರು. ನನ್ನ ಪುತ್ರಿಗೂ ಬ್ಲ್ಯಾಕ್ ಮೇಲ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಎಲ್ಲವನ್ನು ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು
.ಸಿಸಿಬಿ ತನಿಖೆಗೆ ಎಲ್ಲಾ ಸಹಕಾರ ನೀಡುವೆ. ಸಚಿವ ಸೋಮಶೇಖರ್ ಅವರನ್ನು ಭೇಟಿ ಮಾಡಿ ಮಾತನಾಡುವೆ. ನಾವು ಸಾರ್ವಜನಿಕ ಜೀವನದಲ್ಲಿ ಇರೋರು. ನಮ್ಮ ನಮ್ಮಲ್ಲಿ ಯಾವುದೇ ಮುಚ್ಚುಮರೆ ಇರಬಾರದು ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada