ಮಂಡ್ಯ ಜಿಲ್ಲೆ ಮದ್ದೂರು ತಾ|| ಕೊಳಗೆರೆ ಗ್ರಾಮದಲ್ಲಿ ಘಟನೆ. ಜಮೀನೊಂದರ ಬಂಡೆಯ ಕೆಳಗೆ ಪತ್ತೆಯಾಗಿರುವ ಎರಡು ಚಿರತೆ ಮರಿಗಳು.ಎರಡು ಚಿರತೆ ಮರಿಗಳನ್ನ ರಕ್ಷಸಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದ ಯುವಕರು.
ಗ್ರಾಮದ ಶಿವಮೂರ್ತಿ, ಕೀರ್ತಿಕುಮಾರ್ ತಂಡದಿಂದ ಚಿರತೆ ಮರಿಗಳ ರಕ್ಷಣೆ.ಚಿರತೆ ನೋಡಲು ಮುಗಿಬಿದ್ದಿದ್ದ ಊರಿನ ಜನರು. ಚಿರತೆ ಮರಿಗಳ ರಕ್ಷಣೆ ವಿಷಯ ತಿಳಿದು ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದೌಡು.
ಚಿರತೆ ಮರಿಗಳ ವಶಕ್ಕೆ ಪಡೆದು ಚಿರತೆ ಮರಿಗಳು ಸಿಕ್ಕ ಸ್ಥಳದಲ್ಲಿ ಬೋನಿಟ್ಟ ಅರಣ್ಯ ಇಲಾಖೆ. ತಾಯಿ ಚಿರತೆ ಸೆರೆಗೆ ಬೋನ್. ಈ ಹಿಂದೆ ಹಲವು ಮೇಕೆ, ಜಾನುವಾರುಗಳನ್ನ ತಿಂದು ಹಾಕಿದ್ದ ಚಿರತೆ. ಚಿರತೆ ಮರಿಗಳು ಸಿಕ್ಕ ಬೆನ್ನಲ್ಲೆ ಗ್ರಾಮದಲ್ಲಿ ಮನೆ ಮಾಡಿದ ಚಿರತೆ ಆತಂಕ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada