ದಾರುಣ ಘಟನೆ ಮರಳು ತುಂಬಿದ್ದ ಟಿಪ್ಪರ್​ ಲಾರಿ ಪಲ್ಟಿ.

ಮರಳು ತುಂಬಿದ್ದ ಟಿಪ್ಪರ್ ​ಲಾರಿಯೊಂದು ಚರಂಡಿಯಲ್ಲಿ ಪಲ್ಟಿಯಾದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ನಡೆದಿದೆ. ಈ ಘಟನೆಯ ಪರಿಣಾಮ ಟಿಪ್ಪರ್​ ಅಡಿಯಲ್ಲಿ ಬಾಲಕ ಸೇರಿ ಇಬ್ಬರು ಸಿಲುಕಿ ಸಾವನ್ನಪ್ಪಿದ್ದಾರೆ.ಕಳೆದ ರಾತ್ರಿ ಕಲಕಂಬ್ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ. ಟಿಪ್ಪರ್​ ಲಾರಿಯಡಿ ಸಿಲುಕಿ ಮುಕಂದ್ (12) ಮಹಮ್ಮದ್ ಸಲೀಂ(66) ಸಾವನ್ನಪ್ಪಿದ್ದಾರೆ.ಮೃತರು ವಾಡಿ ಪಟ್ಟಣದ ನಿವಾಸಿಗಳಾದ್ದು, ನಿನ್ನೆ ರಾತ್ರಿ ಮನೆ ನಿರ್ಮಾಣ ಕೆಲಸಕ್ಕೆ ಮರಳು ತಂದಿದ್ದರು. ಈ ವೇಳೆ ಟಿಪ್ಪರ್​ ಲಾರಿ ಟೈರ್ ಚರಂಡಿ ಮೇಲೆ ಹತ್ತುತ್ತಿದ್ದಂತೆ ಚರಂಡಿ ಕುಸಿದಿದೆ. ಈ ವೇಳೆ ಇಬ್ಬರು ಲಾರಿಯಡಿ ಸಿಲುಕಿ ಸಾವನ್ನಪ್ಪಿದ್ದಾರೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷಿ ತಾಪಂಡ ನಟಿಸುತ್ತಿರುವ ಮೊದಲ ಹಾಸ್ಯಮಯ ಸಿನಿಮಾ : 'ರೂಪಾಯಿʼ

Thu Feb 9 , 2023
    ‘ಹಣವು ಮೂಲಭೂತ ಅವಶ್ಯಕತೆಯಾಗಿದೆ, ಆದರೆ ಜೀವನದ ಮೌಲ್ಯವನ್ನು ಪ್ರೀತಿ ಮತ್ತು ಸಂಬಂಧದಿಂದ ವ್ಯಾಖ್ಯಾನಿಸಲಾಗಿದೆ ಎನ್ನುತ್ತಾರೆ ನಟಿ ಕೃಷಿ ತಾಪಂಡ. ‘ಹಣವು ಮೂಲಭೂತ ಅವಶ್ಯಕತೆಯಾಗಿದೆ, ಆದರೆ ಜೀವನದ ಮೌಲ್ಯವನ್ನು ಪ್ರೀತಿ ಮತ್ತು ಸಂಬಂಧದಿಂದ ವ್ಯಾಖ್ಯಾನಿಸಲಾಗಿದೆ ಎನ್ನುತ್ತಾರೆ ನಟಿ ಕೃಷಿ ತಾಪಂಡ. ಶಾಲೆಗಳು ನಮಗೆ ಗಾಳಿ, ನೀರು ಮತ್ತು ಆಶ್ರಯ ಮೂರು ಅವಶ್ಯಕವೆಂದು ಕಲಿಸುತ್ತವೆ. ಹಣವು ಈ ಪಟ್ಟಿಗೆ ಸೇರಿಸಬೇಕಾದ ವಿಷಯವಾಗಿದೆ. ಏಕೆಂದರೆ, ಅದು ನಮ್ಮ ಉಳಿವಿಗೆ ಸಹಾಯ ಮಾಡುತ್ತದೆ’ […]

Advertisement

Wordpress Social Share Plugin powered by Ultimatelysocial