ಬಿಜೆಪಿಯಲ್ಲಿ ಯಾವತ್ತೂ ಲಾಭಿ

ಬಿಜೆಪಿಯಲ್ಲಿ ಯಾವತ್ತೂ ಯಾವ  ಲಾಭಿಯೂ ನಡೆದಿಲ್ಲ ಎಂದು  ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಎಂ.ಪಿ, ಎಂಎಲ್ ಎ, ವಿಧಾನ ಪರಿಷತ್ ಆಯ್ಕೆಯಲ್ಲಿ ಲಾಭಿ ನಡೆದಿಲ್ಲ. ಈ ಬಾರಿ ಕೇಂದ್ರದ ನಾಯಕರು ಸ್ಥಳೀಯ ಕಾರ್ಯಕರ್ತರನ್ನ ರಾಜ್ಯ ಸಭೆಗೆ ಆಯ್ಕೆ ಮಾಡಿದ್ದಾರೆ. 15 ರಂದು ರಾಜ್ಯ ಕೋರ್ ಕಮಿಟಿ ಸಭೆ ಇದೆ. ಈ ಸಭೆಯಲ್ಲಿ ವಿಧಾನ ಪರಿಷತ್ ಗೆ ಯಾರನ್ನ ಆಯ್ಕೆ ಮಾಡಬೇಕು ಅನ್ನುವ ಬಗ್ಗೆ ಚರ್ಚೆ ಆಗುತ್ತೆ. ಬಿಜೆಪಿ ಎಲ್ಲಾ ನಾಯಕರು ಕಾರ್ಯಕರ್ತರೆ, ಯಾರಿಗೂ ಕೋಡು ಇಲ್ಲ. ರಾಜ್ಯದಲ್ಲಿ ಚರ್ಚಿಸಿ ಕಳುಸಿದ ಅಭ್ಯರ್ಥಿಗಳ ಬದಲಾವಣೆ ಮಾಡಿದರೆ ರಾಜ್ಯದ ಸೋಲು ಅಂತ ಅಲ್ಲ. ಸರ್ವಾನುಮತದಿಂದ ನಾವೆಲ್ಲರೂ ಒಪ್ಪಿಗೆ ನೀಡಿದ್ದೇವೆ.  ಕಾಂಗ್ರೆಸ್ ನಿಂದ ಬಂದ ಮಾಜಿ ಶಾಸಕರು ಬಿಜೆಪಿ ಕಾರ್ಯಕರ್ತರು. ಪರಿಷತ್ ಸ್ಥಾನ ಕೇಳುವುದು ತಪ್ಪಲ್ಲ. ಯಾರಿಗೆ ನೀಡಬೇಕು ಅನ್ನುವ ತೀರ್ಮಾನ ಹೈಕಮಾಂಡ್  ಮಾಡುತ್ತೆ. ಕುರುಬ ಸಮುದಾಯದಲ್ಲಿ 3 ಮಂದಿ ಇರಬಹುದು, 30 ಮಂದಿ ಇರಬಹುದು. ಜಾತಿ ಪ್ರಶ್ನೆಯೇ ಆಗಲ್ಲ, ಜಾತಿಗಾಗಿ ಟಿಕೆಟ್ ನೀಡುವ ಪಕ್ಷ ಬಿಜೆಪಿ ಅಲ್ಲ. ಯಡಿಯೂರಪ್ಪ ಅವರ ವರ್ಚಸ್ಸು ಕಡಿಮೆ ಆಗುತ್ತೆ ಅನ್ನುವುದು ಕೆಲ ಪತ್ರಕರ್ತರ ಭ್ರಮೆ.ಅವರ ವರ್ಚಸ್ಸು ಯಾವತ್ತೂ ಕಡೆಮೆ ಆಗಲ್ಲ.ಈಡೀ ರಾಜ್ಯದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಲಾಕ್​ಡೌನ್ ನಿಂದ ಸಾಕಷ್ಟು ಸಮಸ್ಯೆಗಳಾಯ್ತು

Fri Jun 12 , 2020
ಕಾಂಗ್ರೆಸ್​ಗೆ ಬರ್ತೇವೆ ಅಂದವರನ್ನೆಲ್ಲ ಕರೆದುಕೊಳ್ಳೋಕೆ ಆಗಲ್ಲ ಅದಕ್ಕೆ ಅಂತಾನೇ ಒಂದು ಕಮಿಟಿ ಇದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ರೋಷನ್ ಬೇಗ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಸಿದರು.  ಬ್ಲಾಂಕ್ ಆಗಿ ನಾವು ಯಾವುದನ್ನೂ ತೆಗೆದುಕೊಳ್ಳಲ್ಲ, ಬರುವವರಿಂದ ನಮಗೆ ಹಾನಿಯಾಗಬಾರದು. ಹೋಗುವಾಗ ಹಾನಿ ಮಾಡಿರುವ ಬಗ್ಗೆ ಯೋಚನೆ  ಮಾಡಬೇಕಾಗುತ್ತದೆ ಬಳಿಕ ನೋಡಿ ತೀರ್ಮಾನ ತೆಗೆದುಕೊಳ್ಳತ್ತೇವೆ. ಸದ್ಯ ರೋಷನ್​ಬೇಗ್ ಅವರು ಬರ್ತಾರೋ ಇಲ್ವೋ ಗೊತ್ತಿಲ್ಲ, ನಮ್ಮ ನಾಯಕರ ಜೊತೆ […]

Advertisement

Wordpress Social Share Plugin powered by Ultimatelysocial