ಬಿಜೆಪಿಯಲ್ಲಿ ಯಾವತ್ತೂ ಯಾವ ಲಾಭಿಯೂ ನಡೆದಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಎಂ.ಪಿ, ಎಂಎಲ್ ಎ, ವಿಧಾನ ಪರಿಷತ್ ಆಯ್ಕೆಯಲ್ಲಿ ಲಾಭಿ ನಡೆದಿಲ್ಲ. ಈ ಬಾರಿ ಕೇಂದ್ರದ ನಾಯಕರು ಸ್ಥಳೀಯ ಕಾರ್ಯಕರ್ತರನ್ನ ರಾಜ್ಯ ಸಭೆಗೆ ಆಯ್ಕೆ ಮಾಡಿದ್ದಾರೆ. 15 ರಂದು ರಾಜ್ಯ ಕೋರ್ ಕಮಿಟಿ ಸಭೆ ಇದೆ. ಈ ಸಭೆಯಲ್ಲಿ ವಿಧಾನ ಪರಿಷತ್ ಗೆ ಯಾರನ್ನ ಆಯ್ಕೆ ಮಾಡಬೇಕು ಅನ್ನುವ ಬಗ್ಗೆ ಚರ್ಚೆ ಆಗುತ್ತೆ. ಬಿಜೆಪಿ ಎಲ್ಲಾ ನಾಯಕರು ಕಾರ್ಯಕರ್ತರೆ, ಯಾರಿಗೂ ಕೋಡು ಇಲ್ಲ. ರಾಜ್ಯದಲ್ಲಿ ಚರ್ಚಿಸಿ ಕಳುಸಿದ ಅಭ್ಯರ್ಥಿಗಳ ಬದಲಾವಣೆ ಮಾಡಿದರೆ ರಾಜ್ಯದ ಸೋಲು ಅಂತ ಅಲ್ಲ. ಸರ್ವಾನುಮತದಿಂದ ನಾವೆಲ್ಲರೂ ಒಪ್ಪಿಗೆ ನೀಡಿದ್ದೇವೆ. ಕಾಂಗ್ರೆಸ್ ನಿಂದ ಬಂದ ಮಾಜಿ ಶಾಸಕರು ಬಿಜೆಪಿ ಕಾರ್ಯಕರ್ತರು. ಪರಿಷತ್ ಸ್ಥಾನ ಕೇಳುವುದು ತಪ್ಪಲ್ಲ. ಯಾರಿಗೆ ನೀಡಬೇಕು ಅನ್ನುವ ತೀರ್ಮಾನ ಹೈಕಮಾಂಡ್ ಮಾಡುತ್ತೆ. ಕುರುಬ ಸಮುದಾಯದಲ್ಲಿ 3 ಮಂದಿ ಇರಬಹುದು, 30 ಮಂದಿ ಇರಬಹುದು. ಜಾತಿ ಪ್ರಶ್ನೆಯೇ ಆಗಲ್ಲ, ಜಾತಿಗಾಗಿ ಟಿಕೆಟ್ ನೀಡುವ ಪಕ್ಷ ಬಿಜೆಪಿ ಅಲ್ಲ. ಯಡಿಯೂರಪ್ಪ ಅವರ ವರ್ಚಸ್ಸು ಕಡಿಮೆ ಆಗುತ್ತೆ ಅನ್ನುವುದು ಕೆಲ ಪತ್ರಕರ್ತರ ಭ್ರಮೆ.ಅವರ ವರ್ಚಸ್ಸು ಯಾವತ್ತೂ ಕಡೆಮೆ ಆಗಲ್ಲ.ಈಡೀ ರಾಜ್ಯದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಯಲ್ಲಿ ಯಾವತ್ತೂ ಲಾಭಿ
Please follow and like us: