ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪುರಸಭೆಯ ಮಳಿಗೆ ಖಾಲಿ ಮಾಡದ ಬಾಡಿಗೆದಾರರು
ಖಾಲಿ ಮಾಡುವಂತೆ ಫೀಲ್ಡಿಗಿಳಿದ ಮುಖ್ಯಾಧಿಕಾರಿ ಗಂಗಾಧರರಾಯಚೂರು ಡಿಸಿ ಆದೇಶ ಹಿನ್ನೆಲೆಖಡಕ್ಕಾಗಿ ವಾರ್ನ್ ಮಾಡಿದ ಮಾನ್ವಿ ಮುಖ್ಯಾಧಿಕಾರಿ ಗಂಗಾಧರಮಾನ್ವಿ ಪುರಸಭೆ ಸಿಬ್ಬಂದಿಗಳಿAದ ಸೂಚನೆಆದಾಯ ಬರುವ ಉದ್ದೇಶದಿಂದ ಮಳಿಗೆ ಹರಾಜು ಮಾಡಲಾಗಿತ್ತು
ಮಳಿಗೆ ನೀಡಿ ಇಲ್ಲವೆ ನಮ್ಮ ಡಿಡಿ ನೀಡುವಂತೆ ಒತ್ತಾಯಮಾನ್ವಿ ಪುರಸಭೆಗೆ ಆದಾಯ ಬರುವ ಉದ್ದೇಶದಿಂದ ಮಾನ್ವಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಅವರು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹರಾಜು ಮಾಡಿದ್ದರು.ಆದರೆ ಹರಾಜು ಪ್ರಕ್ರಿಯೆ ಮುಗಿದು ಮೂರು ತಿಂಗಳು ಕಳೆದರು ಸಹ ಮೊದಲಿದ್ದವರಿಗೆ ಮಳಿಗೆ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು. ಆದರೂ ಮೊದಲಿದ್ದವರು ಮಳಿಗೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಸ್ವತಹ ಮಾನ್ವಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಅವರು ಫೀಲ್ಡಿಗಿಳಿದು ಮಳಿಗೆ ಖಾಲಿ ಮಾಡಿ ಇಲ್ಲವೆ ನಾವೆ ಖಾಲಿ ಮಾಡಿಸಬೇಕಾಗುತ್ತದೆ ಎಂದು ಸೂಚಿಸಿದರು.ಹೀಗಾಗಿ ಮೂರು ತಿಂಗಳು ಕಳೆದರು ಸಹ ನಮಗೆ ಇನ್ನೂ ಮಳಿಗೆ ನೀಡಿಲ್ಲ ಎಂದು ಹೊಸ ಟೆಂಡರ್ ಪ್ರಕ್ರಿಯೆಯಂತೆ ಮಳಿಗೆ ಪಡೆದ ಬಾಡಿಗೆದಾರರು ಮಳಿಗೆ ನೀಡಿ ಇಲ್ಲವೆ ನಾವು ನೀಡಿದ ೫೦ ಸಾವಿರ ಡಿಡಿಯನ್ನು ವಾಪಸ್ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.ಇದರಿಂದಾಗಿ ರಾಯಚೂರು ಜಿಲ್ಲಾಧಿಕಾರಿ ಅವರು ಆದೇಶ ನೀಡಿ ಮೂರು ತಿಂಗಳು ಕಳೆದರು ಸಹ ಮಳಿಗೆ ನೀಡುತ್ತಿಲ್ಲವೆಂದು ಕೆಲ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.ಎಚ್ಚೆತ್ತುಕೊಂಡ ಮಾನ್ವಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಖಾಲಿ ಮಾಡಿ ಇಲ್ಲವೆ ಖಾಲಿ ಮಾಡಿಸಬೇಕಾಗುತ್ತದೆ ಸಲಹೆ ನೀಡಿದರು.
https://play.google.com/store/apps/details?id=com.speed.newskannada