ಭೀಮಾತೀರದಲ್ಲಿ ಮತ್ತೆ ಹಂತಕರ ಹಾವಳಿ ಶುರು

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ನಿವಾಸಿ ನಾಮದೇವ್ ಡಾಂಗೆ ಇಂಡಿಯಲ್ಲಿ ಜ್ಯೂವೆಲರಿ ಶಾಪ್ ನಡೆಸುತ್ತಿದ್ದು 5 ಕೋಟಿ ಹಣ, ಅಥವಾ 3 ಕೆ.ಜಿ ಚಿನ್ನ ಕೊಡುವಂತೆ ಮಹಾದೇವ ಸಾಹುಕಾರ್ ಭೈರಗೊಂಡ ಬೇಡಿಕೆ ಇಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ನಾಮದೇವ್ ಡಾಂಗೆ ಆರೋಪಿಸಿ ದೂರು ನೀಡಿದ್ದಾರೆ. ಮಹಾದೇವ್ ಸಾಹುಕಾರ್ ಭೈರಗೊಂಡ ಹಾಗೂ ಸಹಚರರು ನಾಮದೇವ್ ಡಾಂಗೆಗೆ ಧಮ್ಕಿ ಹಾಕಿದ್ದರು. ಹಣ ಅಥವಾ ಚಿನ್ನ ಕೊಡದಿದ್ದರೆ ಮನೆಗೆ ಬಂದು ತಲೆಗೆ ಗುಂಡಿಕ್ಕುವದಾಗಿ ಬೆದರಿಕೆ ಹಾಕಿದ್ದರು ಎಂದು ಡಾಂಗೆ ದೂರು ನೀಡಿದ್ದಾರೆ. ಈ ಕುರಿತು ಚಡಚಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಹಾದೇವ್ ಸಾಹುಕಾರ್ ಸೇರಿ ಮೂವರ ವಿರುದ್ಧ ಐಪಿಸಿ ಸೆಕ್ಷನ್ 384, 511, 504, 506 ಅಡಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಮಹಾದೇವ್ ಸಾಹುಕಾರ್ ಭೈರಗೊಂಡ ಬಂಧನವಾಗಿದ್ದರೆ ಇನ್ನಿಬ್ಬರು ಸಹಚರರು ಪರಾರಿಯಾಗಿದ್ದಾರೆ. ಇನ್ನೂ ಇಷ್ಟು ದಿನ ಶಾಂತ ವಾಗಿದ್ದ ಭೀಮಾತೀರದಲ್ಲಿ ಮತ್ತೆ ಹಾವಳಿ ಶುರುವಾಯಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ ಪಿ ಅನುಪಮ ಅಗರವಾಲ ಅವ್ರು ಶುರು ಮಾಡಿದ್ದಾರೆ, ಕ್ಲೋಜ್ ನಾವು ಮಾಡ್ತಿವಿ ಎಂದು ಕಡಕ್ ಸಂದೇಶ ನೀಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಆಧಾರ ರಹಿತ ಆರೋಪ ರಾಜ್ಯದ ಜನ ನಂಬಲ್ಲ

Thu Jul 23 , 2020
ರಾಜ್ಯ ರಾಜಕಾರಣದಲ್ಲಿ ಕೊರೊನಾ ಸಂದರ್ಭ ಸಾಕಷ್ಟು ರಾಜಕೀಯ ಪ್ರಹಸನ ನಡೆಯುತ್ತಲೆ ಇದೆ. ರಾಜ್ಯ ಸರ್ಕಾರದ ವಿರುದ್ಧ ಸದಾ ಒಂದಲ್ಲಾ ಒಂದು ವಿಷಯಕ್ಕೆ ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಲೆ ಇದೆ. ಕೊರೊನಾ ಸಂದರ್ಭ ರಾಜ್ಯ ಸರ್ಕಾರ ಹಲವಾರು ಭ್ರಷ್ಟಾಚಾರ ನಡೆಸಿದೆ ಎಂದೆಲ್ಲಾ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟರ್‌ನಲ್ಲಿ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಸತ್ಯಾಂಶವಿಲ್ಲದ ದಾಖಲೆಗಳ ಮೂಲಕ ರಾಜ್ಯದ ಜನರ […]

Advertisement

Wordpress Social Share Plugin powered by Ultimatelysocial