ಮಂಗಳಸೂತ್ರ ಮಾರಿದ ವಲಸೆ ಕಾರ್ಮಿಕ

ಒಡಿಶಾದ ವಲಸೆ ಕಾರ್ಮಿಕನೊಬ್ಬ ಬೆಂಗಳೂರಿನಿAದ ತನ್ನ ಊರಿಗೆ ತೆರಳುವ ಉದ್ದೇಶದಿಂದ ಪತ್ನಿಯ ಮಂಗಳ ಸೂತ್ರ ಮಾರಾಟ ಮಾಡಿರುವ ಹಣದಲ್ಲಿ ಸೈಕಲ್ ಖರೀದಿಸಿದ್ದಾನೆ. ನಾವು ಹಣವಿಲ್ಲದೆ ಪರದಾಡುತ್ತಿದ್ದಾಗ, ನನ್ನ ಹೆಂಡತಿ ಎರಡು ಬೈಸಿಕಲ್ ಗಳನ್ನು ಖರೀದಿಸಲು ತನ್ನ ಮಂಗಳಸೂತ್ರವನ್ನು ಮಾರಿದಳು. ಬಳಿಕ ಸೈಕಲ್ ಖರೀದಿಸಿ ಬೆಂಗಳೂರಿನಿAದ ಹೊರಟೆವು ಎಂದು ಚಂದನ್ ಹೇಳಿದ್ದಾರೆ. ಎರಡು ತಿಂಗಳಿನಿAದ ಯಾವುದೇ ಸಂಪಾದನೆ ಇರಲಿಲ್ಲ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದೆವು, ಕೊನೆಯ ಉಪಾಯವಾಗಿ, ತಲಾ ೫,೦೦೦ ರೂ.ಗೆ ಎರಡು ಸೈಕಲ್‌ಗಳನ್ನು ಖರೀದಿಸಿ ಭದ್ರಾಕ್ ಜಿಲ್ಲೆಗೆ ಹೊರಟೆವು ಎಂದು ವಿವರಿಸಿದ್ದಾರೆ. ಮೂವರು ವಲಸೆ ಕಾರ್ಮಿಕರು ಬೆಂಗಳೂರಿನಿAದ ಒಡಿಶಾ ತಲುಪಿದ್ದು, ಒಬ್ಬಾತ ತನ್ನ ಸೈಕಲ್ನಲ್ಲಿ ಪತ್ನಿಯನ್ನು ಕುಳ್ಳಿರಿಸಿಕೊಂಡಿದ್ದ.

Please follow and like us:

Leave a Reply

Your email address will not be published. Required fields are marked *

Next Post

ಅಗ್ನಿ ಅಕಸ್ಮಿಕ ಗುಡಿಸಲುಗಳು ಭಸ್ಮ

Wed Jun 3 , 2020
ನವದೆಹಲಿ: ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ನಸುಕಿನ ಜಾವ ಅಗ್ನಿದುರಂತ ಸಂಭವಿಸಿ ೧೨೦ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿವೆ. ತುಘಲಕಾಬಾದ್‌ನ ವಾಲ್ಮೀಕಿ ಮೊಹಲ್ಲಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಅಗ್ನಿ ಹೊತ್ತಿ ಉರಿಯಲಾರಂಭಿಸಿದ ಕೂಡಲೇ ಕಳೆದ ಮಧ್ಯರಾತ್ರಿ ೧.೩೦ರ ಹೊತ್ತಿಗೆ ೨೨ ಅಗ್ನಿಶಾಮಕ ಎಂಜಿನ್ ಗಳು ಬಂದು ಬೆಂಕಿಯನ್ನು ನಂದಿಸಿದವು. ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಕೆಲ ದಿನಗಳ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಬೆಂಕಿ ಹತ್ತಿ ಉರಿತು ೨೫೦ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ದವು. […]

Advertisement

Wordpress Social Share Plugin powered by Ultimatelysocial