ಕರ್ನಾಟಕದಾದ್ಯಂತ ಬಾಕಿ ಕಡತಗಳ ವಿಲೇವಾರಿಗೆ ಸೂಚನೆ ನೀಡಲಾಗಿದ್ದು, ದಶಕಗಳಿಂದ ಬಾಕಿಯುಳಿದ ಕಡತಗಳಿಗೆ ಮುಕ್ತಿ ನೀಡುತ್ತೇವೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ.ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮ ಮಾತನಾಡಿದ ಸಚಿವರು, ‘ಕಡತ ವಿಲೇವಾರಿಗೂ ವಿಶೇಷ ಕಾರ್ಯಕ್ರಮ ಹಾಕಿಕೊಳ್ತೇವೆ. ಕರ್ನಾಟಕದಾದ್ಯಂತ ಬಾಕಿ ಕಡತಗಳ ವಿಲೇವಾರಿಗೆ ಸೂಚನೆ ನೀಡಲಾಗಿದ್ದು, ದಶಕಗಳಿಂದ ಬಾಕಿಯುಳಿದ ಕಡತಗಳಿಗೆ ಮುಕ್ತಿ ನೀಡುತ್ತೇವೆ. ಗ್ರಾಮ ವಾಸ್ತವ್ಯ ಬಂದ ಸಿದ್ದ ಹೋದ ಸಿದ್ದ ಕಾರ್ಯಕ್ರಮವಲ್ಲ. ಇದು ನಿಮ್ಮ ಮನೆ ಬಾಗಿಲಿಗೆ ಬರುವ ಸರ್ಕಾರ. ಹಿಂದುಳಿದ ಜನರ ಕೇರಿಗೆ ಹೋಗಿ ಸಮಸ್ಯೆ ಆಲಿಸುತ್ತೇನೆ’ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada