ಮತದಾನ ಜಾಗೃತಿಗೆ ನಿರ್ದೇಶಕ ರಾಜಮೌಳಿ ನೇಮಕ: ಜೆಡಿಎಸ್ ಆಕ್ಷೇಪ

 

 

ರಾಯಚೂರು: ವಿಧಾನಸಭೆ ಚುನಾವಣೆಯಲ್ಲಿ ಮತದಾನ ಜಾಗೃತಿಗೆ ರಾಯಚೂರು ಜಿಲ್ಲಾ ರಾಯಭಾರಿಯಾಗಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಚುನಾವಣಾ ಆಯೋಗದ ನಡೆಗೆ ರಾಯಚೂರು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಎನ್.

ಶಿವಶಂಕರ್ ಆಕ್ಷೇಪಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಶಿವಶಂಕರ್, ರಾಜಮೌಳಿ ಅವರ ತಂದೆ ಬಿಜೆಪಿಯಿಂದ ರಾಜ್ಯಸಭೆ ಸದಸ್ಯ ಸದಸ್ಯರಾಗಿದ್ದಾರೆ. ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ‘ಆರ್.ಎಸ್.ಎಸ್.’ ಎಂದು ಹೆಸರಿಟ್ಟಿದ್ದಾರೆ. ಈ ವಿಚಾರಗಳು ರಾಜಮೌಳಿ ಬಿಜೆಪಿ ಪರವಾಗಿರುವುದನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ಆಂಧ್ರಪ್ರದೇಶದ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರಾಜಮೌಳಿ ಅವರನ್ನು ಮತದಾನ ಜಾಗೃತಿ ರಾಯಭಾರಿಯಾಗಿ ನೇಮಿಸಿರುವುದು ರಾಜಕೀಯ ಪ್ರೇರಿತ ನಿರ್ಧಾರವಾಗಿದ್ದು, ರಾಜ್ಯ ಚುನಾವಣಾ ಆಯೋಗ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

600 ಕೋಟಿ ಅಕ್ರಮ: ಲಾಲು ಕುಟುಂಬ ವಿರುದ್ಧ ಇ.ಡಿ. ಆರೋಪ

Sun Mar 12 , 2023
    ಹೊಸದಿಲ್ಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಮಾಜಿ ರೈಲ್ವೇ ಸಚಿವ ಲಾಲು ಪ್ರಸಾದ್‌ ಯಾದವ್‌ ಕುಟುಂಬ 600 ಕೋಟಿ ರೂ. ಮೌಲ್ಯದ ಅಕ್ರಮ ನಡೆಸಿದೆ ಎಂದು ಜಾರಿ ನಿರ್ದೇಶ ನಾಲಯ(ಇ.ಡಿ.) ಆರೋಪಿಸಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌, ಅವರ ಪುತ್ರರು, ಪುತ್ರಿಯರ ಸಹಿತ ಕುಟುಂಬಸ್ಥರ ಮನೆಗಳ ಮೇಲೆ ಇ.ಡಿ. ಶುಕ್ರವಾರ ದಾಳಿ ನಡೆಸಿತ್ತು. ಈ ವೇಳೆ ದಾಖಲೆ ಇಲ್ಲದ 1 ಕೋಟಿ ರೂ. ನಗದು, ವಿದೇಶಿ ಕರೆನ್ಸಿ, 540 ಗ್ರಾಂ […]

Advertisement

Wordpress Social Share Plugin powered by Ultimatelysocial