ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ

ಮಹಾರಾಷ್ಟ್ರಕ್ಕೆ ಮುಂಗಾರು ಪ್ರವೇಶವಾಗಿದ್ದು, ಮುಂಗಾರು ಚುರುಕಾಗಿದೆ ವಾರಾಂತ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಪ್ರದೇಶದ ಬಿಜ್ನೋರ್ , ಮೊರದಾಬಾದ್, ಫಿಲಿಬಿಟ್ ರಾಮ್ ಪುರ್, ಬರೇಲಿ ಪ್ರದೇಶದಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗಾಳಿಯ ಗಂಟೆಯಲ್ಲಿ 30-40 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮುಂದಿನ 48 ಗಂಟೆಯಲ್ಲಿ ವಿಪರೀತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂಬೈನಲ್ಲಿ ಶನಿವಾರ ಜೋರು ಮಳೆಯಾಗಲಿದ್ದು, ಭಾನುವಾರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದ ಕರಾವಳಿಯಲ್ಲಿ ಜೂ.14 ರವರೆಗೆ ಆರೆಂಜ್ ಅಲರ್ಟ್ ಹಾಗೂ ಜೂನ್ 15 ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆ ಮೋಡ ಕವಿದ ವಾತಾವರಣ ಇರಲಿದ್ದು ಜೂನ್ 14 ರಂದು ಭಾರಿ ಮಳೆಯಾಗಲಿದೆ. ಜೂನ್ 15 ರಂದು ಕರಾವಳಿ ಪ್ರದೇಶದಲ್ಲಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚಿನ ಮಳೆ ಸುರಿಯಲಿದೆ.ಎಂದು ಹವಾಮಾನ ಇಲಾಖೆ ತಿಳಿಸಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಪ್ರಧಾನಿ ಮನೆಗೆ ಕ್ವಾರಂಟೈನ್ ನೋಟಿಸ್

Sat Jun 13 , 2020
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆಯ ಕೆಲಸಗಾರನ ಮಗಳಿಗೆ ಕೊರೊನಾ ಸೋಂಕು ದೃಡಪಟ್ಟಿದೆ ಇದರ ಹಿನ್ನಲೆಯಲ್ಲಿ ಮನಮೋಹನ್ ಸಿಂಗ್ ಮನೆಯು ಕೂಡ ಕ್ವಾರಂಟೈನ್ ಮಾಡಬೇಕೆಂದು ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮನೆಗೆ ಕ್ವಾರಂಟೈನ್ ನೋಟಿಸ್ ಅಂಟಿಸಲಾಗಿದೆ .ಮನಮೋಹನ್ ಸಿಂಗ್ ಮನೆಯಲ್ಲಿ ಸೋಂಕಿತ ಯುವತಿಯನ್ನು ಕ್ವಾರಂಟೈನ್ ಮಾಡಲಾಗಿದೆ.ಇದರಿಂದಾಗಿ ಮನಮೋಹನ್ ಸಿಂಗ್ ಗೆ ಕೊರೊನಾ ಭೀತಿ ಶರುವಾಗಿದೆ.ಮನಮೋಹನ್ ಸಿಂಗ್ ಮನೆಕೆಲಸಗಾರನ ಮಗಳಿಗೆ ಸೋಂಕು […]

Advertisement

Wordpress Social Share Plugin powered by Ultimatelysocial