ಮಾವನ ಜೊತೆ ಹೋಗಿದ್ದ ಹುಡುಗಿಯರು, ಮನೆಗೆ ತೆರಳಿದ್ದು ಹೆಣವಾಗಿ

ನದಿಯ ರಭಸಕ್ಕೆ ಹುಡುಗಿಯರಿಬ್ಬರು ಕೊಚ್ಚಿ ಹೋಗಿರುವ ಘಟನೆ ರಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ನಡೆದಿದೆ. ಹಿರೇಕೆರೂರು ಅಬಲೂರು ಗ್ರಾಮದ ನಿವಾಸಿ ಕೀರ್ತಿ ಇಂಗಳಗುAದಿ ಹಾಗೂ ಕಾಟೇನಹಳ್ಳಿ ಗ್ರಾಮದ ನಿವಾಸಿ ಅಭಿಲಾಷಾ ಹಲಗೇರಿ ಮೃತ ದುರ್ದೈವಿಗಳು. ಮಾವನ ಜೊತೆ ಕಾರು ತೊಳೆಯಲು ನದಿಗೆ ಹೋದಾಗ ಕಾಲು ಜಾರಿ ನದಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಮುಳುಗು ತಜ್ಞರ ಸಾಕಷ್ಟು ಹುಡುಕಾಟದ ಬಳಿಕ ಇಬ್ಬರ ಮೃತುದೇಹ ಪತ್ತೆಯಾಗಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Please follow and like us:

Leave a Reply

Your email address will not be published. Required fields are marked *

Next Post

ರಾಮ ಮಂದಿರ ಮಾದರಿಯ ರೈಲುನಿಲ್ದಾಣ ನಿರ್ಮಾಣ

Mon Aug 3 , 2020
ದೇಶದ ಕೋಟ್ಯಂತರ ಜನರ ನಂಬಿಕೆಯ ಪ್ರತೀಕವಾಗಿರುವ ಶ್ರೀ ರಾಮ ಜನ್ಮಭೂಮಿಯ ಮಂದಿರಕ್ಕೆ ಭೇಟಿ ನೀಡಲು ಬರುವ ಭಕ್ತರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೈಲ್ವೆ ಇಲಾಖೆಯು ಅಯೋಧ್ಯೆಯ ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಮಾದರಿಯ ರೈಲು ನಿಲ್ದಾಣ ನಿರ್ಮಿಸಲು ಭಾರತೀಯ ರೈಲ್ವೆ ಕಾರ್ಯಪ್ರವೃತ್ತವಾಗಿದೆ. ನಿಲ್ದಾಣದ ಕಟ್ಟಡ ವಿನ್ಯಾಸವು ಮಂದಿರದಂತೆ ಗುಮ್ಮಟ, ಗೋಪುರಗಳನ್ನು ಹೊಂದಿರಲಿದೆ. ಈಗಿರುವ ನಿಲ್ದಾಣವನ್ನು 80 […]

Advertisement

Wordpress Social Share Plugin powered by Ultimatelysocial