ಲಬುರಗಿ : ಕಲಬುರಗಿ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಕೋರ್ಟ್‌ ಅನುಮತಿ ನೀಡಿದ

 

ಲಬುರಗಿ : ಕಲಬುರಗಿ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಕೋರ್ಟ್‌ ಅನುಮತಿ ನೀಡಿದ ನಿಟ್ಟಿನಲ್ಲಿ ಇಂದು ಪಟ್ಟಣಕ್ಕೆ ಖುದ್ದು ಎಡಿಜಿಪಿ ಅಲೋಕ್ ಕುಮಾರ್( ADGP Alok Kumar) ಭದ್ರತೆ ಪರಿಶೀಲಿಸಿದ್ದಾರೆ.

ಆಳಂದ ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಕೋರ್ಟ್ ಅನುಮತಿ ನೀಡಲಾಗಿದೆ. ಹೀಗಾಗಿ ಇಂದು ದರ್ಗಾದಲ್ಲಿರೋ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ಹಬ್ಬದ ದಿನ ಪೂಜೆ ಪುನಸ್ಕಾರ ನಡೆಸಲಾಗುತ್ತದೆ. ಇಷ್ಟೇ ಅಲ್ಲದೇ ಕಲಬುರಗಿ ನಗರದ ರಾಮಮಂದಿರದಲ್ಲಿ ಹೋಮ, ಹವನ ಮತ್ತು ಶಿವಮಾಲೆಯನ್ನು ಧರಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಅದೇ ವೇಳೆ ದರ್ಗಾದಲ್ಲಿ ಉರೂಸ್ ನಡೆಸಲಿದ್ದು ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವರ್ಷ ಶಿವರಾತ್ರಿಯಂದು ಪೂಜೆ ಸಮಯದಲ್ಲಿ ದೊಡ್ಡ ಮಟ್ಟದ ಘರ್ಷಣೆ ನಡೆದಿತ್ತು ಈ ಕಾರಣದಿಂದಾಗಿ ಇಂದು ಕಲಬುರಗಿ ದರ್ಗಾ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ವಹಿಸಲಾಗಿದ್ದು. ಖುದ್ದು ಎಡಿಜಿಪಿ ಅಲೋಕ್ ಕುಮಾರ್ ಭದ್ರತೆ ಪರಿಶೀಲನೆ ನಡೆಸಲಿದ್ದಾರೆ. ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಪೊಲೀಸರ ಪಥಸಂಚನಜತೆಗೆ ಬಿಗಿ ಬಂದೋಬಸ್ತ್ ಕೈಗೊಳ್ಳುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

10 ಗಂಟೆಯೊಳಗೆ ಮೊಬೈಲ್ ಚಾರ್ಜ್​ ಮಾಡ್ಕೊಳ್ಳಿ ;

Thu Feb 16 , 2023
ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ  ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ  ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ […]

Advertisement

Wordpress Social Share Plugin powered by Ultimatelysocial