ಶಾರುಖ್ ಪುತ್ರನ “ಪರ” ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್..

ಡ್ರಗ್ಸ್ ಪಾರ್ಟಿ ಮಾಡುವಾಗ ಸಿಕ್ಕಿಬಿದ್ದ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಶಾರುಖ್ ಪುತ್ರನ ಬಂಧನ ಇದೀಗ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಆರ್ಯನ್ ಖಾನ್ ಬಂಧನದ ಬಳಿಕ ಬಾಲಿವುಡ್ ಸ್ಟಾರ್ ಮಕ್ಕಳು ಏನ್ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಎನ್ನುವ ಚರ್ಚೆ ಎಲ್ಲೇಡೆ ಜೋರಾಗಿ  ಶರರುವಾಗಿದೆ.

ಇನ್ನೂ ಈ ವಿಷಯ ತಿಳಿದ ಶಾರುಖ್ ಖಾನ್ ತಮ್ಮ ಸ್ಪೇನ್ ಪ್ರವಾಸವನ್ನು ಸಹ ರದ್ದುಗೊಳಿಸಿ ತನ್ನ ಮಗನ ರಕ್ಷಣೆಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಶಾರುಖ್ ಖಾನ್ ಗೆ ನೈತಿಕ ಬೆಂಬಲ ನೀಡಲು ಬಾಲಿವುಡ್ ಮಂದಿ ರಾತ್ರಿಯಿಂದಲೇ ಶಾರುಖ್ ಖಾನ್ ನಿವಾಸ ‘ಮನ್ನತ್’ ಗೆ ಭೇಟಿ ನೀಡುತ್ತಿದ್ದಾರೆ. ಹಲವರು ಧೈರ್ಯದ ಪೋನ್‌ ಕಾಲ್‌ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತು ಪೋಸ್ಟ ಮಾಡುತ್ತಿದ್ದಾರೆ.

ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ವ್ಯವಸ್ಥಿತ ರೀತಿಯಲ್ಲಿ ದಾಳಿ ಮಾಡುವುದರ ಮೂಲಕ ಎನ್ ಸಿ ಬಿ ಅಧಿಕಾರಿಗಳು ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಜನರನ್ನು ಈಗಾಗಲೇ ಬಂಧಿಸಿದ್ದು ಇವರ ವಿಚಾರಣೆ ಕೂಡ ನಡೆಯುತ್ತಿದೆ.ಇನ್ನೂ ಒಂದು ವಾರದ ಟೈಮಗ ಕೊಡಿ ಎಂದು NDA ತಂಡ ಕೇಳಿದೆ. ಜೊತೆಗೆ ಆರ್ಯನ್‌ “ತಾನು ಕಳೆದ ನಾಲ್ಕು ವರ್ಷದಿಂದ ಮಾಧಕ ವಸ್ತುಗಳನ್ನು ಸೇವನೆ ಮಾಡುತ್ತಿದೆನೆ” ಎಂಬ ಹೇಳಿಕೆ ಇನ್ನೂ ಪರಿಸ್ಥಿತಿಯನ್ನು ಹೆಚ್ಚು ತಿವ್ರಗೊಳಿಸಿದೆ.ಆದರೆ ಈಗ ಸದ್ಯ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಆರ್ಯನಗೆ ಜೈಲಾ ಅಥವಾ ಬೇಲ್‌ ..? ಎನ್ನುವದಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮನದಾಳದ ಮಾತು - ವಿಚ್ಛೇದನದ ನಂತರ ಸ್ಯಾಮ್‌ ನ ಮೊದಲ ಮಾತು

Mon Oct 4 , 2021
ಮದುವೆ ನಂತರ ಜೀವನದಲ್ಲಿ ಬದಲಾವಣೆ ಸಹಜ ಹಾಗೇ ವಿಚ್ಛೇದನ ನಂತರವೂ ಬದಲಾವಣೆ ಕಂಡಿದ್ದಾರೆ ನಟಿ ಸಮಂತಾ. ನೆನ್ನೆ ಅಷ್ಟೇ ಸ್ಯಾಮ್‌  ಮತ್ತು ನಾಗ ಚೈತನ್ಯ ರವರ 4 ವರ್ಷಗಳ ದಾಂಪತ್ಯಕ್ಕೆ ಪುಲ್‌ ಸ್ಟಾಪ್‌ ನೀಡಿದ್ದಾರೆ.ಈ ವಿಷಯವನ್ನು ಸೋಶಿಯಲ್​ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ . ಇದಲ್ಲದೆ ಅಕ್ಟೋಬರ್​ 3 ರಂದು ಸಮಂತಾ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಪ್ರೊಪೈಲ್‌ ಹೆಸರು ಬದಲಿಸಿದ್ದಾರೆ. ಎಸ್ ಇದ್ದ ಹೆಸರನ್ನು ಸಮಂತಾ ಎಂದು ಮಾಡಿದ್ದಾರೆ. ಈ […]

Advertisement

Wordpress Social Share Plugin powered by Ultimatelysocial