ಸದನ ಕರೆದಾಗ ಲೆಕ್ಕ ಕೊಡುತ್ತೇವೆ-ಸಂಸದ ಪ್ರತಾಪ್ ಸಿಂಹ ಹೇಳಿಕೆ

ಭ್ರಷ್ಟಾಚಾರದ ಬಿಲ ಎಲ್ಲೆಲ್ಲಿ ಇವೆ ಅಂತಾ ಕಾಂಗ್ರೆಸ್​ನವರಿಗೆ ಗೊತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು,ಭ್ರಷ್ಟಾಚಾರದ ಬಿಲ ಎಲ್ಲೆಲ್ಲಿ ಇವೆ ಅಂತಾ ಕಾಂಗ್ರೆಸ್​ನವರಿಗೆ ಗೊತ್ತಿದೆ. ಏಕೆಂದ್ರೆ ಆ ಬಿಲ ಸೃಷ್ಟಿ ಮಾಡಿದವರೆ ಕಾಂಗ್ರೆಸಿಗರು. ಎಲ್ಲಿ ಹೇಗೆ ಭ್ರಷ್ಟಾಚಾರ ಮಾಡಬಹುದು ಎಂಬುದು ಅವರಿಗೆ ಚೆನ್ನಾಗಿ ಅನುಭವವಿದೆ. ಇದೇ ಅನುಭವ ಇಟ್ಟುಕೊಂಡು ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಲಿ.

ಸದ್ಯ ಕೊರೊನಾ ಸೋಂಕಿತರ ಜೀವ ಉಳಿಸುವ ಕೆಲಸ ಮಾಡಬೇಕಿದೆ. ಲೆಕ್ಕ ಎಲ್ಲೂ ಹೋಗಲ್ಲ, ಸದನ ಕರೆದಾಗ ಲೆಕ್ಕ ಕೊಡುತ್ತೇವೆ. ಇದು ಸರಕಾರಕ್ಕೆ ಸಹಕಾರ ಕೊಡುವ ಸಮಯ, ಲೆಕ್ಕ ಕೇಳುವ ಸಮಯವಲ್ಲ. ವಿಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು

Please follow and like us:

Leave a Reply

Your email address will not be published. Required fields are marked *

Next Post

ಆಶಾ ಕಾರ್ಯಕರ್ತೆಯರ ಪ್ರತಿಭಟನೆ- ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ

Fri Jul 24 , 2020
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಹತ್ತು ವರ್ಷಗಳಿಂದ ಆಶಾ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೂ ಸರ್ಕಾರ ಮಾತ್ರ ನಮ್ಮ ನೆರವಿಗೆ ಧಾವಿಸುತ್ತಿಲ್ಲ. ಸಿಗುವ ವೇತನದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12,000 ರೂಪಾಯಿ ಗೌರವಧನ ಖಾತರಿಪಡಿಸಬೇಕು. ಕೊರೊನಾ ಸೋಂಕಿಗೆ ತುತ್ತಾದ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಹಾಗೂ […]

Advertisement

Wordpress Social Share Plugin powered by Ultimatelysocial