ನಮ್ಮ ದೇಶದಲ್ಲಿ ಕಾರ್ಮಿಕರಿಲ್ಲದೆ ಮಾನವ ಜೀವನ ಶೈಲಿ ಬದಲಾಗದು ಆದರಿಂದ ಈ ಸಮಾಜದಲ್ಲಿ ಕಾರ್ಮಿಕರ ಪಾತ್ರ ಬಹು ಮುಖ್ಯ ವಾದದ್ದು ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅಭಿಪ್ರಾಯ ಪಟ್ಟರು ನಗರದ ರೋಟರಿ ಕ್ಲಬ್ ಅವರಣದಲ್ಲಿ ಆಯೋಜಿಸಿದ್ದ ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆಯಾ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಓಬ್ಬರಿಗು ತನ್ನದೆ ಆದ ಸಂಘಟನೆ ಮುಖ್ಯ ಆದುದರಿಂದ ಉತ್ತಮ ಕೆಲಸ ಹಾಗು ಯಾವುದೇ ಕಾರ್ಮಿಕನಿಗೆ ತೊಂದರೆ ಆದಲ್ಲಿ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು ಈ ಸಂದರ್ಭ ದಲ್ಲಿ ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆ ಯಾ ಅಧ್ಯಕ್ಷ ಹೇಮಂತ್ ಆರ್.ಮರಿಗೌಡ್ರು “ಮಾತನಾಡಿ ಮಾತಿಗಿಂತ ಕೃತಿ ಲೇಸು” ನಮ್ಮ ನಾಡಿನಲ್ಲಿ ದುಡಿಯುವ ಕಾರ್ಮಿಕರ ಕೊಂದು ಕೊರತೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಯಾವಾಗಲು ಸ್ಪಂದಿಸುವ ಕೆಲಸ ಮಾಡುತ್ತೇವೆ ಹಾಗೆ ಕಳೆದ ಐದು ವರ್ಷಗಳಿಂದ ನಮ್ಮ ಸಂಘಟನೆ ಬೆಂಗಳೂರು ನಗರ ದಲ್ಲಿ ಕಾರ್ಯ ನಿರ್ವಹಿಸುತಿತ್ತು ಈಗ ಗ್ರಾಮಾಂತರ ಪ್ರದೇಶದ ತಾಲ್ಲೂಕಿನಲ್ಲಿ ಸಹ ಘಟಕ ಸ್ಥಾಪನೆಗೆ ಓತ್ತು ನೀಡಿ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭ ದಲ್ಲಿ ನಗರ ವೃತ ನಿರೀಕ್ಷಕ ಚಂದ್ರಶೇಖರ್ ರೋಟರಿ ಅರುಣ್ ಅಟೋ ಚಾಲಕರ ಅಧ್ಯಕ್ಷ ಬಾಲರಾಜ್ ಅಡವೀಶ್ . ಶರತ್ ರಮೇಶ್.ಉಮೇಶ್ ಯಶವಂತ್, ತಿಮ್ಮಶೆಟ್ಟಿ ,ಪತ್ರಕರ್ತ ಸಂಘದ ಅಧ್ಯಕ್ಷ ಕಣಕಟ್ಟೆ ಕುಮಾರ್, ಉಪಸ್ಥಿತರಿದ್ದರು.
ಸಮಾಜದಲ್ಲಿ ಕಾರ್ಮಿಕರ ಪಾತ್ರ ಬಹು ಮುಖ್ಯವಾದದ್ದು
Please follow and like us: