ಲಕ್ಷ್ಮೇಶ್ವರದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಣಿ ಸಭೆ

ಈ ಬಾರಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ ಪ್ರಥಮ ಬಾರಿ ಲಕ್ಷ್ಮೇಶ್ವರ ಪಟ್ಟಣದ ಬಾಳಿಹಳ್ಳಿಮಠ ಕಲ್ಯಾಣ ಮಂಟಪದಲ್ಲಿ ನಾಳೆ ಜುಲೈ 20 ರಂದು ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದೇಶ ಹೂಗಾರ, ಹಾಗೂ ತಾಲೂಕ ಯುವ ಮೋರ್ಚಾ ಅದ್ಯಕ್ಷ ನವೀನ ಹೀರೆಮಠ ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಯುವ ಮೋರ್ಚಾ ಹಾಗೂ ಶಿರಹಟ್ಟಿ ಯುವ ಮೋರ್ಚಾ ಮಂಡಳದಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಈ ಬಾರಿ ಕಾರ್ಯಕಾರಣಿ ಲಕ್ಷ್ಮೇಶ್ವರದಲ್ಲಿ ನಡೆಯಲಿದ್ದು ಜಿಲ್ಲೆಯ ಯುವ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿಲಿದ್ದಾರೆ. ಜಿಲ್ಲಾ ಕೇಂದ್ರ ದಲ್ಲಿ ನಡೆಯುತ್ತಿದ್ದ ಕಾರ್ಯಕಾರಣಿ ಈ ಬಾರಿ ತಾಲೂಕ ಮಟ್ಟದಲ್ಲಿ ನಡೆಸಲು ರಾಜ್ಯ ಬಿಜೆಪಿ ಆದೇಶದಂತೆ ಕಾರ್ಯಕಾರಣಿ ಸಭೆ ಮಾಡುವ ಉದ್ದೇಶ ಪಕ್ಷದ ಸಂಘಟನೆ,ಪಕ್ಷದ ಚಟುವಟಿಕೆ ಮಂಡಳ ಯುವ ಮೋರ್ಚಾ ಮಂಡಳವರದಿ ನಡೆಯಲಿದ್ದು ಶಿರಹಟ್ಟಿ ಯುವ ಮೋರ್ಚಾ ದಿಂದ ಮತಕ್ಷೇತ್ರದಲ್ಲಿ ಸ್ವಚ್ಛತೆ, ಸಸಿ ನೆಡುವ ಕಾರ್ಯಕ್ರಮ, ಕರೋನ ಸಂದರ್ಭದಲ್ಲಿ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದಾರೆ.

ಕಾರ್ಯಕಾರಣಿ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಸಿ ಪಾಟೀಲ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ”ಸಂದೀಪಕುಮಾರ ಸ್ಥಳೀಯ ಶಾಸಕ ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವರಾಜಗೌಡ ಹಿರೇಮನಿಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು, ಸ್ಥಳಿಯ ಕಾರ್ಯಕರ್ತರು ಆಗಮಿಸುವರು ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಗೆ ಹೆಚ್ಚಿದ ನೀರು..

Tue Jul 19 , 2022
ಬಾಗಲಕೋಟೆ  :ಮಹಾರಾಷ್ಟ್ರದಲ್ಲಿ ನಿರಂತರ ಮಳೆ… ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಗೆ ಹೆಚ್ಚಿದ ನೀರು.. ನದಿಯಲ್ಲಿ ಕಂಡು ಬರ್ತಿರೋ ಮೊಸಳೆಗಳು…ನದಿ ತೀರದ ಗ್ರಾಮಗಳಿಗೆ ನಿಲ್ಲದ ಮೊಸಳೆ ಕಾಟದ ಆತಂಕ.. ಜಿಲ್ಲೆಯ ಅಸ್ಕಿ ಗ್ರಾಮದ ಬಳಿ ತುಂಬಿ ಹರಿಯುತ್ತಿರೋ ಕೃಷ್ಣಾ ನದಿ.. ಈ ಮಧ್ಯೆ ದೋಣಿ ಪ್ರಯಾಣದಲ್ಲಿದ್ದ ಜನರಿಗೆ ಕಂಡು ಬಂದ ಮೊಸಳೆಗಳು… ನದಿ ತೀರದಲ್ಲಿ ಭಯದ ವಾತಾವರಣ.. ನದಿ ದಡದಲ್ಲಿ ಜಾಗೃತಿ ವಹಿಸಲು ಸೂಚನೆ.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial