೨ ದ್ವಿಚಕ್ರ ವಾಹನ ಮಧ್ಯ ಡಿಕ್ಕಿ

ದ್ವಿಚಕ್ರ ವಾಹನಗಳ ಮಧ್ಯ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನಪ್ಪಿದ್ದು ಇನೊರ್ವನ ಸ್ಥಿತಿ ಗಂಭಿರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ – ಕೃಷ್ಣಾ ಕಿತ್ತೂರ ರಸ್ತೆ ಮಧ್ಯದಲ್ಲಿರುವ ಅನ್ನೇಶ ಅಪರಾಜ ತೋಟದ ಬಳಿ ಈ ಘಟನೆ ಸಂಭವಿಸಿದೆ.ಅಪಘಾತಕ್ಕೊಳಗಾದ ಇಬ್ಬರು ಕೃಷ್ಣಾ ಕಿತ್ತೂರ ಗ್ರಾಮಸ್ಥರಾಗಿದ್ದು ಮುರತೆಪ್ಪ ಬಿರಾದರ (೩೨) ಸಾವನಪ್ಪಿದ್ದು ಈತ ಐನಾಪೂರ ದಿಂದ ಕಿತ್ತೂರ ಮಾರ್ಗವಾಗಿ ಹೋಗುವಾಗ ಈ ದುರ್ಘಟನೆ ನಡೆದಿದೆ. ಈತ ಕಳೆದ ೨೫ ವರ್ಷಗಳ ಹಿಂದೆ ಬಿಜಾಪೂರ ಜಿಲ್ಲೆಯ ದಾಶಾಳ ಗ್ರಾಮದಿಂದ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮಕ್ಕೆ ದುಡಿಯಲು ಬಂದಿದರು. ಇನ್ನು ಗಾಯಗೊಂಡಿರುವ ವರ್ದಮಾನ ಉಪಾಧ್ಯ ಕೃಷ್ಣಾ ಕಿತ್ತೂರದಿಂದ – ಐನಾಪೂರಗೆ ಹೋಗುವಾಗ ಅಪಘಾತಗಿಡಾಗಿದ್ದು, ಇತನ ಸ್ಥಿತಿ ಗಂಭೀರವಾಗಿದ್ದು ಇತನನ್ನ ಅಥಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆ ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Please follow and like us:

Leave a Reply

Your email address will not be published. Required fields are marked *

Next Post

ಇನ್ಸ್ ಪೆಕ್ಟರ್ ನೂತನ ಪ್ರಯೋಗ

Sun Jun 14 , 2020
ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುಮಾರು 1,500 ಆಟೋಗಳು ಚಾಲನೆಯಲ್ಲಿ ಇದ್ದು ಹೆಚ್ಚು ಅಪರಾಧ ಪ್ರಕರಣಗಳು, ಕಳವು, ಪ್ರಯಾಣಿಕರು ಲಗೇಜ್ ಕಳೆದುಕೊಳ್ಳೋದು ಸಾಮಾನ್ಯವಾಗಿ ಆಟೋಗಳಲ್ಲೇ ಆಗಿದ್ದು. ಆಟೋರಿಕ್ಷಾದ ನೊಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಲು ಬಹುತೇಕ ಮಂದಿಗೆ ಸಾಧ್ಯವಾಗುವುದಿಲ್ಲ. ಆದ್ರೆ ಇನ್ನುಂದೆ ಹಾಗೆ ಆಗಲ್ಲ. ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್​ಪೆಕ್ಟರ್ ಸೋಮಶೇಖರ್ ಅವರು ನೂತನ ಪ್ರಯೋಗ ಮಾಡಿದ್ದು, ಪಟ್ಟಣದ ಎಲ್ಲಾ ಆಟೋಗಳಿಗೆ ಯೂನಿಕ್ ನಂಬರ್ ನೀಡಿದ್ದಾರೆ. ಆಟೋಗಳಲ್ಲಿ ಚಾಲಕರು ಮತ್ತು ಆಟೋ […]

Advertisement

Wordpress Social Share Plugin powered by Ultimatelysocial