ದ್ವಿಚಕ್ರ ವಾಹನಗಳ ಮಧ್ಯ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನಪ್ಪಿದ್ದು ಇನೊರ್ವನ ಸ್ಥಿತಿ ಗಂಭಿರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ – ಕೃಷ್ಣಾ ಕಿತ್ತೂರ ರಸ್ತೆ ಮಧ್ಯದಲ್ಲಿರುವ ಅನ್ನೇಶ ಅಪರಾಜ ತೋಟದ ಬಳಿ ಈ ಘಟನೆ ಸಂಭವಿಸಿದೆ.ಅಪಘಾತಕ್ಕೊಳಗಾದ ಇಬ್ಬರು ಕೃಷ್ಣಾ ಕಿತ್ತೂರ ಗ್ರಾಮಸ್ಥರಾಗಿದ್ದು ಮುರತೆಪ್ಪ ಬಿರಾದರ (೩೨) ಸಾವನಪ್ಪಿದ್ದು ಈತ ಐನಾಪೂರ ದಿಂದ ಕಿತ್ತೂರ ಮಾರ್ಗವಾಗಿ ಹೋಗುವಾಗ ಈ ದುರ್ಘಟನೆ ನಡೆದಿದೆ. ಈತ ಕಳೆದ ೨೫ ವರ್ಷಗಳ ಹಿಂದೆ ಬಿಜಾಪೂರ ಜಿಲ್ಲೆಯ ದಾಶಾಳ ಗ್ರಾಮದಿಂದ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮಕ್ಕೆ ದುಡಿಯಲು ಬಂದಿದರು. ಇನ್ನು ಗಾಯಗೊಂಡಿರುವ ವರ್ದಮಾನ ಉಪಾಧ್ಯ ಕೃಷ್ಣಾ ಕಿತ್ತೂರದಿಂದ – ಐನಾಪೂರಗೆ ಹೋಗುವಾಗ ಅಪಘಾತಗಿಡಾಗಿದ್ದು, ಇತನ ಸ್ಥಿತಿ ಗಂಭೀರವಾಗಿದ್ದು ಇತನನ್ನ ಅಥಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆ ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
೨ ದ್ವಿಚಕ್ರ ವಾಹನ ಮಧ್ಯ ಡಿಕ್ಕಿ
Please follow and like us: