ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಪ್ರಧಾನಿ ಮೋದಿ ಸಂತಾಪ

ರಾಯಗಡ: ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ, 88 ವರ್ಷದ ಶಾಂತಿ ದೇವಿ ಅವರು ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಶಾಂತಿ ದೇವಿ ಬಡವರು ಮತ್ತು ಹಿಂದುಳಿದವರ ಧ್ವನಿಯಾಗಿದ್ದರು.

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮತ್ತು ನ್ಯಾಯಯುತ ಸಮಾಜವನ್ನು ರಚಿಸಲು ಅವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನೋವಾಗಿದೆ. ಶಾಂತಿ ದೇವಿ ಅವರ ಸೇವಾ ಆಲೋಚನೆಗಳು ನನ್ನ ಹಾಗೂ ಅಸಂಖ್ಯಾತ ಅಭಿಮಾನಿಗಳಲ್ಲಿ ಸದಾ ಜೀವಂತವಾಗಿ ಇರುತ್ತವೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಾಹನ ಸವಾರರಿಗೆ ಗುಡ್‌ ನ್ಯೂಸ್‌|DRIVERSLICENSE|speed news kannada

Mon Jan 17 , 2022
ನವದೆಹಲಿ : ನೀವು ಭಾರತೀಯ ಚಾಲನಾ ಪರವಾನಗಿಯನ್ನ ಹೊಂದಿದ್ರೆ, ನೀವು ವಿಶ್ವದ ಅನೇಕ ಅತ್ಯುತ್ತಮ ದೇಶಗಳಲ್ಲಿ ವಾಹನ ಚಲಾಯಿಸಬಹುದು. ಹೌದು, ಭಾರತೀಯ ಚಾಲನಾ ಪರವಾನಗಿಯ ಮೇಲೆ ಈ ೧೫ ದೇಶಗಳ ಕಾನೂನು ನಿಮಗೆ ವಾಹನ ಚಲಾಯಿಸಲು ಅನುಮತಿ ನೀಡಿದೆ. ಹಾಗಾದ್ರೆ, ಆ ದೇಶಗಳ್ಯಾವು ಗೊತ್ತಾ? ಮುಂದಿದೆ ಪಟ್ಟಿ. ಭಾರತೀಯ ಚಾಲನಾ ಪರವಾನಗಿ ಮೂಲಕವೂ ನೀವು ವಿದೇಶಕ್ಕೆ ಚಾಲನೆ ಮಾಡಬಹುದು. ಭಾರತದ ಚಾಲನಾ ಪರವಾನಗಿ ಮಾನ್ಯವಾಗಿರುವ ಅನೇಕ ದೇಶಗಳು ಜಗತ್ತಿನಲ್ಲಿವೆ. ಆ […]

Advertisement

Wordpress Social Share Plugin powered by Ultimatelysocial